ಮಾಜಿ ಶಾಸಕನ ಜೇಬಿಗೆ ಕೈಹಾಕಿದ ಕಳ್ಳ : ಹೌಹಾರಿದ ಶಾಸಕರು ಕೊಟ್ಟರು ಬಿಸಿ ಕಜ್ಜಾಯ..!

K 2 Kannada News
ಮಾಜಿ ಶಾಸಕನ ಜೇಬಿಗೆ ಕೈಹಾಕಿದ ಕಳ್ಳ : ಹೌಹಾರಿದ ಶಾಸಕರು ಕೊಟ್ಟರು ಬಿಸಿ ಕಜ್ಜಾಯ..!
WhatsApp Group Join Now
Telegram Group Join Now

K2kannadanews.in
Crime News ರಾಯಚೂರು : ಜನಸಾಗರ ಎಲ್ಲಿದೆಯೋ ಅಲ್ಲಿ ಪಿಕೋಟ್ ಕಳ್ಳರು ಇದ್ದೇ ಇರುತ್ತಾರೆ. ಇತ್ತೀಚಿಗೆ ಸ್ಮಾರ್ಟ್ ಆದ ಅವರು ವಿಐಪಿಯಂತೆ ಬಂದು ವಿಐಪಿಗಳ ಪರ್ ಎದುರಿಸುವುದು ಕಾಮನ್ ಆಗಿದೆ. ಹೀಗೆ ಖತರ್ನಾಕ್ ಕಳ್ಳನೊಬ್ಬ ಮಾಜಿ ಶಾಸಕರ ಜೇಬಿಗೆ ಕತ್ತರಿ ಹಾಕಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆಸಿದೆ.

ಹೌದು ಸಚಿವ ಎನ್.ಎಸ್ ಬೊಸರಾಜು ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಹಿನ್ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿಶಾಸಕ ಹುಲಗೇರಿಗೆ ಅವರು ಊಟಕ್ಕೆ ಹೋಗುವ ವೇಳೆ ಹಿಂಬಾಲಕರು‌ ಹೆಚ್ಚಿದ್ದ ಸಮಯ ನೋಡಿ ಕಳ್ಳ ಕೈಚಳಕ ತೋರಿಸಿದ್ದಾನೆ. ಜೇಬಿನಲ್ಲಿದ್ದ 70 ಸಾವಿರ ಹಣದ ಕಂತೆಯನ್ನು ಕಳ್ಳ ಗಲಾಟೆಯಲ್ಲಿ ಸೈಲೆಂಟ್ ಎಗರಿಸುವ ಪ್ರಯತ್ನ ಮಾಡಿದಾಗ ತಬ್ಬಿಬ್ಬಾದ ಶಾಕರು ಕಳ್ಳನನ್ನು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ಹಿಂಬಾಲಕನ ಬಂಗಾರದ ಬ್ರಾಸ್ಲೆಟ್ ಹೊಡೆಯುವ ಯತ್ನವನ್ನೂ ಮಾಡಿದ್ದಾನೆ.

WhatsApp Group Join Now
Telegram Group Join Now
Share This Article