ಮುಳುಗಿದ ಸೇತುವೆ ಹಲವು ಹಳ್ಳಿಗಳಿಗೆ ಸಂಪರ್ಕ ಕಟ್..

K 2 Kannada News
ಮುಳುಗಿದ ಸೇತುವೆ ಹಲವು ಹಳ್ಳಿಗಳಿಗೆ ಸಂಪರ್ಕ ಕಟ್..
WhatsApp Group Join Now
Telegram Group Join Now

K2kannadanews.in

sunken bridge ಲಿಂಗಸುಗೂರು : ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಆರ್ಭಟ ಬೆಚ್ಚಿಬಿಳಿಸುವಂತಿದೆ. ರಾಜ್ಯದ ಎಲ್ಲ ನದಿಗಳಂತೆ ಕೃಷ್ಣಾ ನದಿ ಸಹ ತುಂಬಿ ಹರಿಯುತಿತ್ತು. ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿಯು ಉಂಟಾಗಿದೆ.

ನಾರಾಯಣಪುರ ಜಲಾಶಯದಿಂದ 1,80,000 ಕ್ಯೂಸೆಕ್ಸ್ ನೀರನ್ನು ಕೃಷ್ಣೆಗೆ ಬಿಡುಗಡೆ ಮಾಡಿರುವ ಕಾರಣ ಮೈದುಂಬಿ ಹರಿಯುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಶೀಲಹಳ್ಳಿಯಲ್ಲಿರುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಲಿಂಗಸೂಗೂರು ತಾಲ್ಲೂಕಿನ ಯರಗೋಡಿ, ಯಳಗುಂದಿ, ಕಡದರಗಡ್ಡಿ, ಮ್ಯಾದರಗಡ್ಡಿ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಟ್ ಆಗಿದೆ. ಮೇಲ್ಭಾಗದಲ್ಲಿ ಮಳೆ ಮುಂದುವರಿದ ಹಿನ್ನೆಲೆ ಜನರು ಎಚ್ಚರಿಕೆಯಿಂದಲೂ ತಾಲೂಕು ಆಡಳಿತ ಡಂಗೂರ ಸಾರುತ್ತಿದೆ.

WhatsApp Group Join Now
Telegram Group Join Now
Share This Article