ಕೊಲೆ‌ ಪ್ರಕರಣ ಭೇದಿಸಿದ ಪೊಲೀಸ್ ಶ್ವಾನ : ಕೊಲೆಗಡುನ ಮನೆಗೆ ಕರೆದೊಯ್ದ ರೋಚಕ ವೀಡಿಯೋ..

K 2 Kannada News
ಕೊಲೆ‌ ಪ್ರಕರಣ ಭೇದಿಸಿದ ಪೊಲೀಸ್ ಶ್ವಾನ : ಕೊಲೆಗಡುನ ಮನೆಗೆ ಕರೆದೊಯ್ದ ರೋಚಕ ವೀಡಿಯೋ..
WhatsApp Group Join Now
Telegram Group Join Now

K2kannadanews.in

Crime News ಲಿಂಗಸುಗೂರು : ಪ್ರಸ್ತುತ ಕಾಲದಲ್ಲಿ ಯಾರನ್ನ ನಂಬಬೇಕು ಯಾರನ್ನ ಬಿಡಬೇಕು ಅನ್ನೋದೇ ಪ್ರಶ್ನೆಯಾಗಿದೆ. ಇವತ್ತು ನಾವು ಹೇಳೋದಕ್ಕೆ ಹೊರಟಿರೋ ಸ್ಟೋರಿಯಲ್ಲಿ ಪ್ರಾಣ ಸ್ನೇಹಿತನೇ ಜೀವಕ್ಕೆ ಜೀವದಂತಿದ್ದ ಗೆಳೆಯನನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆಗೈದಿದ್ದಾನೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದಲ್ಲಿ ಕೊಲೆ ನಡೆದಿದೆ. ಇಲ್ಲಿ ರಕ್ತಸಿಕ್ತವಾಗಿ ಬಿದ್ದಿರೋ ಈತನ ಹೆಸರು ಬಸನಗೌಡ ಅಂತ. 43 ವರ್ಷದ ಯರಗುಂಟಿ ಗ್ರಾಮದ ಈತನಿಗೆ ಅದೇನಾಗಿತ್ತೋ ಏನೋ ತನ್ನದೇ ಜಮೀನಿನಲ್ಲಿ ರಕ್ತದ‌ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಯರದ್ದೋ ಕರೆ ಬಂತು ಅಂತ ಎದ್ದು ಹೋಗಿದ್ದ ಬಸನಗೌಡ ಒಂದು ರಾತ್ರಿ ಕಳೆದರೂ ಮನೆಗೆ ಬಾರದಿದ್ದಾಗ, ಅತ್ತ ಫೋನ್ ಕೂಡ ಸ್ವಿಚ್ ಆಗಿದ್ದರಿಂದ ಸಹಜವಾಗಿ ಮನೆಯವರಿಗೆ ಗಾಬರಿಯಾಗಿ ಹುಡುಕಾಟ ನಡೆಸಿದ್ದಾರೆ.‌ ಹೀಗೆ ಹುಡುಕುತ್ತಾ ಜಮೀನಿನ ಕಡೆಗೆ ಹೋದಾಗ ಬಸನಗೌಡ ಸತ್ತು ಬಿದ್ದಿದ್ದ. ಬಸನಗೌಡನ ಶವ ನೋಡುತ್ತಲೇ ಗಾಭರಿಯಾಗಿ ಓಡಿ ಹೋಗಿ ಮನೆಯವರಿ ಹಾಗೂ ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಬಂದು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌. ಯಾವಾಗ ಇಲ್ಲೊಂದು‌ ಕೊಲೆ ನಡೆದಿದೆ ಅನ್ನೋ‌ ಮಾಹಿತಿ ಲಿಂಗಸುಗೂರು ಪೊಲೀಸರಿಗೆ ಹೋಯ್ತೋ, ಕೂಡಲೇ ಯರಗುಂಟಿ ಗ್ರಾಮದ ಈ ಘಟನಾ ಸ್ಥಳಕ್ಕೆ ಪೋಲಿಸ್ರು ಭೇಟಿ ಕೊಟ್ಟಿದಾರೆ.

ಸ್ಥಳ ಪರಿಶೀಲನೆ‌ ಮಾಡಿದಾಗ ಪೋಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಸನಗೌಡನ ದೇಹದ ಹೊರತು ಬೇರೆ ಏನೂ ಕಾಣಿಸಲಿಲ್ಲ. ಆದ್ರೆ ಒಂದು ಕಿಲೋ ಮೀಟರ್ ದೂರದಲ್ಲಿ ರಕ್ತ ಮೆತ್ತಿದ ಕೊಡಲಿಯೊಂದು ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಶ್ವಾನದಳವನ್ನ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿದ ಪೊಲೀಸರು ತನಿಖೆಯನ್ನ ಚುರುಕುಗೊಳಿಸ್ತಾರೆ. ಯಾವಾಗ ಬಸನಗೌಡನ ಶವ ಇದ್ದ ಜಾಗಕ್ಕೆ ಬಂದ ಡಾಗ್ ಸ್ಕ್ವಾಡ್ ಟಿಂನ ಶ್ವಾನ ಶವ ಮೂಸಿ‌ ನೋಡಿ, ನೇರವಾಗಿ ಕೊಡಲಿ ಬಿದ್ದ ಜಾಗಕ್ಕೆ ತೆರಳಿದೆ. ಕೊಡಲಿಯನ್ನು ಮೂಸಿ ನೋಡಿದ್ದೇ ತಡ ನೇರವಾಗಿ ಪೊಲೀಸ್ ನಾಯಿ ಕೊಲೆ ನಡೆದ ಸ್ಥಳದಿಂದ ಮೂರುವರೆ ಕಿಲೋ‌ಮೀಟರ್ ದೂರದಲ್ಲಿದ್ದ ಹಂತಕನ ಮನೆಗೆ ತೆರಳಿ ಬೊಗಳುತ್ತ ನಿಂತಿದೆ. ಅಷ್ಟರಲ್ಲಿ ಪೊಲೀಸರಿಗೆ ಹಂತಕ ಯಾರು ಅನ್ನೋ ಸ್ಪಷ್ಟ ಮಾಹಿತಿ ಸಿಕ್ಕಿದೆ.

WhatsApp Group Join Now
Telegram Group Join Now
Share This Article