ಮುಳುಗಿದ ದೇವಸ್ಥಾನ, ಸೇತುವೆ ಮುಳುಗಿದರೆ ಯಾದಗಿರಿ ಸಂಪರ್ಕ ಕಟ್..

K 2 Kannada News
ಮುಳುಗಿದ ದೇವಸ್ಥಾನ, ಸೇತುವೆ ಮುಳುಗಿದರೆ ಯಾದಗಿರಿ ಸಂಪರ್ಕ ಕಟ್..
WhatsApp Group Join Now
Telegram Group Join Now

K2kannadanews.in

Krishna river flood ದೇವದುರ್ಗ : ನಾರಾಯಣಪುರದ ಜಲಾಶಯದಿಂದ (Narayanpur dam) ಕೃಷ್ಣಾ ನದಿಗೆ (Krishna river) 22 ಗೇಟ್ ಗಳ (Gates) ಮೂಲಕ 1.50 ಲಕ್ಷ ಕ್ಯೂಸೆಕ್‍ ನೀರು (water) ಹರಿಸಲಾಗುತ್ತಿದೆ. ತಾಲ್ಲೂಕಿನ ಹೂವಿನಹೆಡಗಿ ಗ್ರಾಮದ ಬಳಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ (Temple) ಸಂಪೂರ್ಣ ಮುಳುಗಡೆಯಾಗಿದ್ದು, ಸೇತುವೆ ಮುಳುಗಲು ಕೆಲವೇ ಅಡಿಗಳು ಬಾಕಿ ಇದೆ.

ಮೇಲ್ಭಾಗದಲ್ಲಿ (Upper) ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ಹೊರಹರಿವು (Outflow) ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪ್ರವಾಹ (Flood) ಭೀತಿಯು ಎದುರಾಗಿದೆ. ದಿನದಿಂದ ದಿನಕ್ಕೆ (day by day) ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು, ನಾಳೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. 2.40 ಲಕ್ಷ ಕ್ಯುಸೆಕ್ ನೀರು ಹರಿಸಿದಲ್ಲಿ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಲಿದೆ.

ದೇವದುರ್ಗ, ಲಿಂಗಸುಗೂರು ಮತ್ತು ರಾಯಚೂರು ತಾಲ್ಲೂಕಿನ ಸುಮಾರು 60ಕ್ಕೂ ಹೆಚ್ಚಿನ ಹಳ್ಳಿಗಳು ಪ್ರವಾಹಕ್ಕೆ ಸಿಲುಕಲಿವೆ. ಪ್ರಸ್ತುತ 1.50 ಲಕ್ಷ ಕ್ಯೂಸೆಕ್ ನೀರು ಮಾತ್ರ ಬಿಟ್ಟಿರುವುದರಿಂದ ಕೆಲ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಎದುರಾಗಿದೆ. ಪ್ರವಾಹ ಸಂಭವಿಸುವ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article