ಬೈಕ್ ಸವಾರನ ಜೀವ ಪಡೆದ ಯಮರೂಪಿ ಲಾರಿ..

K 2 Kannada News
ಬೈಕ್ ಸವಾರನ ಜೀವ ಪಡೆದ ಯಮರೂಪಿ ಲಾರಿ..
WhatsApp Group Join Now
Telegram Group Join Now

K2kannadanews.in

Accident News ರಾಯಚೂರು : ಯಮ ಸ್ವರೂಪಿಯಾಗಿ ಬಂದ ಲಾರಿಯೊಂದು (Lorry) ಬೈಕ್ (Bike) ಸವಾರನ ಜೀವ ಪಡೆದ ಘಟನೆ ರಾಷ್ಟ್ರೀಯ ಹೆದ್ದಾರಿ (National haiway) 167ರಲ್ಲಿ ಬರುವ ರಾಯಚೂರು ವಿಶ್ವವಿದ್ಯಾಲಯದ ಬಳಿ ಜರುಗಿದೆ.

ಹೌದು ರಾಯಚೂರು (Raichur) ತಾಲ್ಲೂಕಿನ ಯರಗೇರಾ (Yaragera) ಗ್ರಾಮದ ಹತ್ತಿರದ ರಾಯಚೂರು ವಿಶ್ವ ವಿದ್ಯಾಲಯದ (Raichur university) ಬಳಿ ಲಾರಿ ಮತ್ತು ಬೈಕ್ ನಡುವೆ ಮುಖ ಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ (Spot death). ಭಾನುವಾರ (sunday) ತಡರಾತ್ರಿ ಘಟನೆ ನಡೆದಿದ್ದು, ಮೃತಪಟ್ಟ ಬೈಕ್ ಸವಾರ ಆಂಧ್ರ ಪ್ರದೇಶದ (andra Pradesh) ಮಾಧವರಂನ ಮದನಪಲ್ಲಿ ಗ್ರಾಮದ ರೆಡ್ಡಿ(37) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ರಾಯಚೂರಿನಿಂದ ಮಾಧವರಂಗೆ ತೆರಳುತ್ತಿದ್ದು, ಲಾರಿ ಆಂಧ್ರ ಪ್ರದೇಶದಿಂದ ರಾಯಚೂರಿನ ಕಡೆ ತೆರಳುವಾಗ ಮುಖ ಮುಖಿ ಡಿಕ್ಕಿ ಸಂಭವಿಸಿದೆ ಎಂದು ಹೇಳಾಲಾಗುತ್ತಿದೆ. ಅಪಘಾತ (accident) ಬಳಿಕ ಲಾರಿ ಚಾಲಕ (Driver) ಸ್ಥಳದಿಂದ ಪರಾರಿಯಾಗಿದ್ದಾನೆ (escape). ಸ್ಥಳಕ್ಕೆ ಯರಗೇರಾ ಪೊಲೀಸರು (Police) ಆಗಮಿಸಿ ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

WhatsApp Group Join Now
Telegram Group Join Now
Share This Article