This is the title of the web page
This is the title of the web page
Local News

ವಚನಗಳಲ್ಲಿ ಸಾರಸತ್ವವಿದ್ದಾಗ ಮಾತ್ರ ಸಾರ್ಥಕ – ಯಾಳಗಿ


ರಾಯಚೂರು. ವಚನಗಳಲ್ಲಿ ಸಾರಸತ್ವವಿದ್ದಾಗ ಮಾತ್ರ ವಚನಗಳ ರಚನೆ ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂದು ಹಿರಿಯ ಸಾಹಿತಿ ರಮೇಶ ಬಾಬು ಯಾಳಗಿ ಅವರು ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ವೇಣು ಜಾಲಿಬೆಂಚಿ ಅವರ ಪರಮೇಶನ ನೂರೊಂದು ವಚನಗಳ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು, ವೇಣು ಜಾಲಿಬೆಂಚಿ ಅವರ ವಚನಗಳಲ್ಲಿ ಸಾರಸತ್ವವಿದೆ, ಪ್ರತಿಯೊಂದು ವಚನಗಳನ್ನು ರಚನೆಯ ಸಂದರ್ಭದಲ್ಲಿ ಅವರ ಮನದಾಳದಿಂದ ಹೊರಬಂದ ವಚನಗಳು ಮನುಷ್ಯನ ಮನಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದರು. ಸತ್ವ ಮತ್ತು ಆಲೋಚನೆ ದೃಷ್ಟಿಯಿಂದ 12ನೇ ಶತಮಾನದ ಆಧುನಿಕ ವಚನಗಾರರಿಗೂ ಆಧು ನಿಕ ವಚನಗಾರರಿಗೂ ಸರಿಸಾಟಿ ಆಗಲಾರದ ಮನೋಭಾವನೆ ಇದ್ದರೂ ಕೂಡ ವಚನ ಪರಂಪ ರೆಯನ್ನು ಮುಂದುವರೆಸಿಕೊಂಡು ಆ ಬೆಳಕಿಗಾಗಿ ಸತ್ವಯುತಕ್ಕಾಗಿ ಆಶಾದಾಯಕಕ್ಕಾಗಿ ಖುಷಿಯಾ ಗಿದೆ ಎಂದು ತಿಳಿಸಿದರು.

ವೇಣು ಜಾಲಿಬೆಂಚಿ ಅವರು ಕ್ರಿಯಾಶೀಲ ಬರಹಗಾರ ಸಾವಿರಾರು ವಚನಗಳನ್ನು ರಚಿಸಿ ವಾಟ್ಸಾಪ್ ಫೇಸ್ ಬುಕ್‌ಗಳ ಜಾಲತಾಣದಲ್ಲಿ ಹರಿ ಬಿಟ್ಟು ಪರಿಚಯಿಯಾಗಿದ್ದಾರೆ, ಸಾವಿರಾರು ವಚನಗಳನ್ನು ರಚಿಸಿ ಗಜಲ್ ಗಾರುಡಿಗನಾಗಿ ದ್ದಾನೆ, ಅಪ್ಪ ಮಗನ ಕೃತಿಗಳ ಮೂಲಕ ಕತೆಗಾರ ನಾಗಿದ್ದಾನೆ, ತಿಳಿಯದೆ ಹೋದೆ ಕವನ ಸಂಕಲ ನದ ಮೂಲಕ ಕವಿಯಾಗಿ ತಳವೂರಿದ್ದಾನೆ, ಬುದ್ದನಾಗು ಮರ ಹುಡುಕಿ ಹೈಕು ಸಂಕಲನದ ಮೂಲಕ ರೆಕ್ಕೆ ಬಿಚ್ಚಿ ಹಾರಾಡಿದ್ದಾನೆ, ಇದೀಗ ಪರಮೇಶನ ನೂರೊಂದು ವಚನಗಳ ಮೂಲಕ ಸಾರ ಸತ್ವಲೊಕಕ್ಕೆ ನೀಡಿ ಆಧುನಿಕ


[ays_poll id=3]