ಏನ್ ಕಾಣಿಸ್ತು ಗುರುವೇ ನಿಂಗೆ ಹಂಗ ಓಡ್ತಾ ಇದಿಯ..

K 2 Kannada News
ಏನ್ ಕಾಣಿಸ್ತು ಗುರುವೇ ನಿಂಗೆ ಹಂಗ ಓಡ್ತಾ ಇದಿಯ..
WhatsApp Group Join Now
Telegram Group Join Now

K2kannadanews.in

devotee, crocodile, ran ರಾಯಚೂರು : ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ, ಗೂಳಿಗಡ್ಡೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದೆ. ನೀರಿನಲ್ಲಿ ಇಳಿದು ನಮಸ್ಕರಿಸಲು ಮುಂದಾದ ಭಕ್ತನೂರ್ವನಿಗೆ ಅದೇನು ಕಾಣಿಸ್ತೊ ಗೊತ್ತಿಲ್ಲ ಎದ್ನೋ ಬಿದ್ನೋ ಅಂತ ಓಡಿ ಹೋದ ವೀಡಿಯೋ ನೋಡಿ ಹೇಗಿದೆ.

 

ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿಪಾತ್ರದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ, ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಿದೆ. ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಭಕ್ತನಿಗೆ ಮೊಸಳೆ ಶಾಕ್ ಕೊಟ್ಟಿದೆ.

ದೇವಸ್ಥಾನಕ್ಕೆ ದಡದಿಂದಲೇ ನಮಸ್ಕರಿಸುತ್ತಿರುವ ಭಕ್ತರು ಭಕ್ತನಿಗೆ, ಮೊಸಳೆ ಕಂಡಿದೆ ಆಗ ಎದ್ನೋ ಬಿದ್ನೋ ಎಂದು ದಡಕ್ಕೆ ಓಡಿ ಹೋಗಿದ್ದಾನೆ ಭಕ್ತ, ಜನ ನೀರಿಗೆ ಇಳಿದರೆ ಸಾಕು ಅಟ್ಯಾಕ್ ಮಾಡೋಕೆ ಹಂಬಲಿಸುತ್ತಿರುವ ಮೊಸಳೆಗಳು, ಹಾಗಾಗಿ ಗ್ರಾಮಸ್ಥರು ಎಚ್ಚರಿಕೆಯಿಂದ ಇದ್ದು, ನದಿಗೆ ಇಳಿಯದಂತೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಎಚ್ಚರಿಕೆ ನಡೆದಿವೆ.

WhatsApp Group Join Now
Telegram Group Join Now
Share This Article