K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ..

ರಾಜ್ಯಭವನದ ಮೂಲಕ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮುಗಿಸಲು ಸಂಚು ರೂಪಿಸಿದ ಬಿಜೆಪಿ-ಜೆಡಿಎಸ್ ನಡೆ ಖಂಡಿಸಿ ಅಹಿಂದ ಮತ್ತು ಎಲ್ಲಾ ಸಮುದಾಯದ ಒಕ್ಕೂಟದಿಂದ ದಿ.27 ರಂದು ಬೆಂಗಳೂರಿನ – ಫ್ರೀಡಂ ಪಾರ್ಕ್ ಮೂಲಕ ರಾಜ್ಯಭವನ ಚಲೋ ಬೃಹತ್ ಮೆರವಣಿಗೆ ಹೋರಾಟ ನಡೆಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ. ಶಾಂತಪ್ಪ ಅವರು ಹೇಳಿದರು.

ರಾಯಚೂರು ನಗರದ ಕನ್ನಡ ಭವನದಲ್ಲಿ ಶ್ರೀಮತಿ ವಿಮಲಾಬಾಯಿ ನಿಜಾಮಕಾರಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಡಿ.ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಭಗತನ ಪದಗಳು ಕೃತಿಯನ್ನು ವಿವಿಧ ಹಿರಿಯ ಸಾಹಿತಿಗಳು ಸೇರಿ ಬಿಡುಗಡೆಗೊಳಿಸಿದರು.

ಆಕ್ಸ್ ಫರ್ಡ್ ಸಮೂಹ ಸಂಸ್ಥೆ ಮತ್ತು ಪದವಿಪೂರ್ವ ಪದವಿ ಮತ್ತು ಸ್ನಾತಕೋತ್ತರ ಇವರ ಆಶ್ರಯದಲ್ಲಿ ದಿವಗಂತ ಶೇಷಯ್ಯ ಶ್ರೇಷ್ಠಿ ರವುಡ ಕುಂದಾ ಇವರ ಸ್ಮರಣಾರ್ಥವಾಗಿ ಮೇರುಜೀವ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ, ಘಟಿಕೋತ್ಸವ, ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭ ಅ.04 ರಂದು ಆಯೋಜಿಸಲಾಗಿದೆ.

ಮೂಡ ಪ್ರಕರಣಕ್ಕೆ ಸಂಬಂದಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ, ರಾಜ್ಯಪಾಲರ ಧೋರಣೆ ಖಂಡಿಸಿ ದಿ. 27 ರಂದು ರಾಜ್ಯಭವನ ಚಲೋ ಪ್ರತಿಭಟನೆ ನಡೆಸಲಾಗುವುದು ಎಂದು ಕನಕದಾಸ ಉದ್ಯಾನವನ ಸಮಿತಿಯ ಅಧ್ಯಕ್ಷ ಕೆ.ಆಂಜನೇಯ ಹೇಳಿದರು.

WhatsApp Group Join Now
Telegram Group Join Now
Share This Article