K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ

ಬೆಳ್ಳಂ ಬೆಳಗ್ಗೆ ಮೊಸಳೆಯೊಂದು ಕೆರೆಯಲ್ಲಿ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿತ್ತು, ಉದ್ಯಾನವನದ ವಾಕಿಂಗ್ ಕಾರ್ಡರ್, ಮಕ್ಕಳು ಆಟವಾಡುವ ಸ್ಥಳದಲ್ಲಿಯೇ ಮೊಸಳೆ ಪ್ರತ್ಯಕ್ಷವಾಗಿದ್ದು ಆತಂಕ ಮೂಡಿಸಿತ್ತು. ಕೊನೆಗೂ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಹಸೆ ಹಿಡಿದು ಸ್ಥಳೀಯರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಹಿಂದುಳಿದ ವರ್ಗದಲ್ಲಿ ಬರುವ ಕೆ. ಸತ್ಯನಾರಾಯಣ ತಮ್ಮ ಮಕ್ಕಳಿಗೆ ನಕಲಿ ಎಸ್ ಟಿ ಜಾತಿ ಪ್ರಮಾಣ ಪತ್ರ ಕೊಡಿಸಿದ್ದು, ಅದನ್ನು ರದ್ದು ಪಡಿಸಬೇಕೆಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗಿಯ ಕಾರ್ಯದರ್ಶಿಯಾದ ಎನ್ ರಘುವೀರ ನಾಯಕ ತಿಳಿಸಿದರು.

ಕಳೆದ 13 ವರ್ಷಗಳಿಂದ ಎಸ್ ಎಫ್ ಐ ಸಂಘಟನೆಯಲ್ಲಿ ಸಕ್ರಿಯ ವಾಗಿ ಗುರುತಿಸಿಕೊಂಡು ಸಂಘಟನೆ ಸಿದ್ಧಾಂತಗಳಿಗೆ ಬದ್ಧನಾಗಿ ನಡೆದು ಕೊಂಡಿದ್ದೇನೆ ಆದರೆ ರಮೇಶ ಮೀರ ಪೂರು ಅವರು ಉದ್ದೇಶಪೂರ್ವ ಕವಾಗಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಿವಕುಮಾರ ಮ್ಯಾಗಳಮನಿ ಅವರು ಗಂಭೀರವಾಗಿ ಆರೋಪಿಸಿದರು.

ಸಮುದಾಯ ದರ್ವೇಶ್ ಹೆಸರು ದುರ್ಬಳಕೆ ಮಾಡಿಕೊಂಡು ದರ್ವೇಶ್ ಕಂಪನಿ ಕೋಟ್ಯಂತರ ಹಣ ವಂಚನೆ ಮಾಡಿರುವುದನ್ನು ತೀವ್ರ ಖಂಡಿಸಿ ದರ್ವೇಶ್ ಸಮುದಾ ಯದ ಸಂಘಟನೆ ಮುಖಂಡರು ನಗರದ ಟಿಪ್ಪು ಸುಲ್ತಾನ್ ಉದ್ಯಾನ ವನದಲ್ಲಿ ಪ್ರತಿಭಟನೆ ನಡೆಸಿದರು. ಸಮುದಾಯದ ಹೆಸರಲ್ಲಿ ಜನರಿಗೆ ತೀವ್ರ ವಂಚನೆ ಮಾಡಿದ್ದಾರೆ ಇದ ರಿಂದ ಸಮುದಾಯಕ್ಕೆ ಅಪಮಾನ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು.

WhatsApp Group Join Now
Telegram Group Join Now
Share This Article