K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜುವೆಲ್ಲರಿಸ್ ವತಿಯಿಂದ ರಾಯಚೂರು ನಗರ ರಂಜಿತಾ ಪ್ಯಾಲೆಸ್ ನಲ್ಲಿ ಇಂದಿನಿಂದ 29 ರವರೆಗೆ ಬೆಳ್ಳಿ ಬಂಗಾರದ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಆ ಯೋಜನೆ ಮಾಡಲಾಗಿದೆ ಇದರ ಸದುಪಯೋಗ ರಾಯಚೂರಿನ ಜನತೆ ಪಡೆಯಲು ಜುವೆಲ್ಲರ್ಸ್ ಮ್ಯಾನೆಜರ್ ಮನವಿ ಮಾಡಿದ್ದಾರೆ.

ರಾಯಚೂರು ಪಂಡಿತ್ ಪಂಚಾಕ್ಷರಿ ಗವಾಯಿಗಳ ಸಂಸ್ಥೆ ವತಿಯಿಂದ ಪಂಡಿತ್ ಪಂಚಾಕ್ಷರಿ ಗವಾಯಿಗಳ, ಅವರ ಪುಣ್ಯ ದಿನಾಚರಣೆ ಅಂಗವಾಗಿ 44ನೇ ಸಂಗೀತ ಸಮ್ಮೇಳನ ಕಾರ್ಯಕ್ರಮವನ್ನು, ದಿ.28 ರಂದು ನಗರದ ಸಿಟಿ ಟಾಕೀಸ್ ಹತ್ತಿರ ಗಣದಿನ್ನಿ ಕಲ್ಯಾಣ ಮಂಟ ಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಸೂಗೂರೇಶ ಆಸ್ಕಿಹಾಳ್‌ ಅವರು ಹೇಳಿದರು.

ಡಾ.ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಯಾಪಲದಿನ್ನಿ ಸಂಯುಕ್ತಾಶ್ರಯದಲ್ಲಿ ಸಂಸ್ಥೆ 13ನೇ ವಾರ್ಷಿಕೋತ್ಸವ ಅಂಗವಾಗಿ 8ನೇ ವರ್ಷದ ರಾಜಮಟ್ಟದ ಡಾ. ಎಪಿಜೆ ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ ಪ್ರದಾನ ಮತ್ತು ಕಲಾಂ ಅವರ 13 ಬೆಳ್ಳಿ ನಾಣ್ಯಗಳ ಬಿಡುಗಡೆ ಸಮಾ ರಂಭವನ್ನು ದಿ.28 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಲಾ ಗಿದೆ ಎಂದು ಸಂಸ್ಥೆಯ ಕಾರ್ಯ ದರ್ಶಿ ನರಸಿಂಹಲು ಅವರು ಹೇಳಿದರು.

ಭಾರತ ವಿಕಾಸ್ ಪರಿಷತ್ ವತಿಯಿಂದ ರಾಷ್ಟ್ರೀಯ ಸಮೂಹ ಗಾಯನ ಮತ್ತು ಭಾರತ್ ಕೋ ಜಾನೋ ಲಿಖಿತ ಪರೀಕ್ಷೆ ಸ್ಪರ್ಧಾ ಕಾರ್ಯಕ್ರಮವನ್ನು ಆಗಸ್ಟ್. 25 ರಂದು ನಗರದ ನಿಜಾಲಿಂಗಪ್ಪ ಕಾಲೋನಿ ವಿದ್ಯಾಭಾರತಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಾನಕಿ ಪುರೋ ಹಿತ ಅವರು ಹೇಳಿದರು.

WhatsApp Group Join Now
Telegram Group Join Now
Share This Article