ಟ್ರೈನ್ ನಲ್ಲಿ ಪ್ರಯಾಣ ಮಾಡೋ ಪೋಷಕರೇ ಎಚ್ಚರ : ಉದ್ಯಾನ್ ಎಕ್ಸ್‌ಪ್ರೆಸ್ ನಲ್ಲಿ ಮಗು ಕಿಡ್ನ್ಯಾಪ್..

K 2 Kannada News
ಟ್ರೈನ್ ನಲ್ಲಿ ಪ್ರಯಾಣ ಮಾಡೋ ಪೋಷಕರೇ ಎಚ್ಚರ : ಉದ್ಯಾನ್ ಎಕ್ಸ್‌ಪ್ರೆಸ್ ನಲ್ಲಿ ಮಗು ಕಿಡ್ನ್ಯಾಪ್..
Oplus_131072
WhatsApp Group Join Now
Telegram Group Join Now

K2kannadanews.in

Child Kidnapp ರಾಯಚೂರು : ರಾಯಚೂರಿನಿಂದ ಬೆಂಗಳೂರಿಗೆ (Raichur- Benglore) ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ (Udyan express train) ಹೋಗುತ್ತಿದ್ದ ವೇಳೆ ತಂದೆ,‌ ತಾಯಿ ಮತ್ತು 3 ವರ್ಷದ ಮಗು (Family) ಜೊತೆ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡು, ಮಧ್ಯರಾತ್ರಿ (midnight) ಮಗುವಿಗೆ ಬಿಸ್ಕೇಟ್ (Basket) ಕೊಟ್ಟು ಪುಸಲಾಯಸಿ, ಪೋಷಕರು ಮಲಗಿದ ಬಳಿಕ ಮಗು ಸಮೇತ ಎಸ್ಕೇಪ್ ಆದ ಘಟನೆ ನಡೆದುದೆ.

ಟ್ರೈನ್ ನಲ್ಲಿ ಪ್ರಯಾಣ ಮಾಡೋ ಪೋಷಕರೇ (Parents) ಎಚ್ಚರ. ಸಹ ಪ್ರಯಾಣಿಕರ ಮಾತಿಗೆ ಮರುಳಾದ್ರೆ, ನಿಮ್ಮ ಮಕ್ಕಳು (Child) ಕ್ಷಣಾರ್ಧದಲ್ಲೇ ಕಣ್ಮರೆಯಾಗುತ್ತಾರೆ. ರಾಯಚೂರಿನಿಂದ ಬೆಂಗಳೂರಿಗೆ ಗೂಳೆ ಹೊರಟಿದ್ದ ದಂಪತಿಯ ಮೂರು ವರ್ಷದ (3 years) ಮಗು ಕಿಡ್ನಾಪ್ ಆಗಿದೆ. ಪ್ರಕಾಶ್-ಹಂಪಮ್ಮ ದಂಪತಿಯ ಮೂರು ವರ್ಷದ ಮಗು ಕಿಡ್ನಾಪ್ ಆಗಿದೆ. ಇದೇ ಆಗಸ್ಟ್ (August) 29ರಂದು ಮಾರ್ಗ ಮಧ್ಯೆ ಆಂದ್ರದ (Andra) ಅನಂತಪುರದಲ್ಲಿ (Ananthapur) ಘಟನೆ ನಡೆದಿದೆ.

ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಬಂಡೆಗುಡ್ಡ ಗ್ರಾಮದ ಪ್ರಕಾಶ ಹಂಪಮ್ಮ ಎಂಬುವರ 3 ವರ್ಷದ ಮಗಗುವನ್ನು ಟ್ರೈನ್ ನಲ್ಲಿ (Train) ಮಾತನಾಡಿಸುತ್ತಾ ಬಿಸ್ಕೇಟ್ ಕೊಟ್ಟು ಪುಸಲಾಯಸಿದ್ದ ಬೇರೊಬ್ಬ ದಂಪತಿಗಳು, ರಾತ್ರಿ ಮಗು, ಪೋಷಕರು (Parents) ಮಲಗಿದ ನಂತರ ಮಗು ಸಮೇತ ಎಸ್ಕೇಪ್ (escape) ಆಗಿದ್ದಾರೆ. ಈ ಬಗ್ಗೆ ಕೆಲ ಹೊತ್ತಲ್ಲೇ ಅನಂತಪುರ ರೈಲ್ವೆ ಪೊಲೀಸರಿಗೆ (railway police) ದೂರು ನೀಡಿದ್ದಾರೆ ಮಗು ತಂದೆ ಪ್ರಕಾಶ್. ದೂರು ದಾಖಲೆಸಿಕೊಂಡ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

WhatsApp Group Join Now
Telegram Group Join Now
Share This Article