ಸಿಂಧನೂರು : ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರವಾಹನ ಸಮಾರರ ಮೇಲೆ ಹರಿದ ಟಿಪ್ಪರ್ ಹರಿದು ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಸಾಸಲಮರಿ ಕ್ಯಾಂಪ್ ಬಳಿ ನಡೆದಿದೆ.
ಬೈಕ್ ಸವಾರರ ಮೇಲೆ ಟಿಪ್ಪರ್ ಹರಿದು ಇಬ್ಬರು ಸಾವು..
ಸಿಂಧನೂರು ತಾಲೂಕಿನ ಸಾಸಲಮರಿ ಕ್ಯಾಂಪ್ ಬಳಿ ಘಟನೆ ನಡೆದಿದೆ. ಸಿಂಧನೂರಿನಿಂದ ಸಾಸಲಮರಿ ಮರಿ ಕ್ಯಾಂಪ್ ಗೆ ಡೀಸೆಲ್ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ, ಟಿಪ್ಪರ್ ಒಂದು ಡಿಕ್ಕಿ ಹೊಡೆದು ಇಬ್ಬರೂ ಬೈಕ್ ಸವಾರರ ಮೇಲೆ ಹತ್ತಿಸಿದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಲಾರಿಯ ಚಕ್ರದ ಅಡಿ ಸಿಲುಕಿಕೊಂಡಿದ್ದ ಎರಡು ಮೃತ ದೇಹಗಳನ್ನು ಜೆಸಿಬಿಯನ್ನು ಬಳಸಿ ಹೊರ ತೆಗೆಯಲಾಯಿತು. ಎರಡು ವೃತ್ತ ದೇಹಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಯ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ಘಟನಾ ಸ್ಥಳಕ್ಕೆ ಆಗಮಿಸಿದಂತಹ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
[ays_poll id=3]