ಕಲ್ಲೂರು ಕುಟುಂಬಸ್ಥರ ಸಾವು ಪ್ರಕರಣ : ಡಿಸಿ ಹೇಳಿದ್ದಿಷ್ಟು..!

K 2 Kannada News
ಕಲ್ಲೂರು ಕುಟುಂಬಸ್ಥರ ಸಾವು ಪ್ರಕರಣ : ಡಿಸಿ ಹೇಳಿದ್ದಿಷ್ಟು..!
WhatsApp Group Join Now
Telegram Group Join Now

K2kannadanews.in

Crime News ವಿಷಾಹಾರ : ಇಡೀ ಜಿಲ್ಲೆಯನ್ನೇ (District) ಬಿಚ್ಚಿ ಬೀಳಿಸಿದ್ದ, ಒಂದೇ ಕುಟುಂಬದ (fimely) ನಾಲ್ವರು ಮೃತಪಟ್ಟು (died) ಓರ್ವ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆಗೆ (RIMS) ಜಿಲ್ಲಾಧಿಕಾರಿಗಳಾದ (DC) ನಿತೀಶ್ ಕೆ ಭೇಟಿ ನೀಡಿ ಯುವತಿ ಆರೋಗ್ಯ (Health) ವಿಚಾರಿಸಿದ್ದಾರೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಒಂದು ಘಟನೆ ಜರುಗಿದ್ದು, ಘಟನೆ ಮಾಹಿತಿ (Information) ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೀಶ್ ಕೆ ಅವರು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ (Media) ಮಾತನಾಡಿದ ಅವರು ಪ್ರಾಥಮಿಕವಾಗಿ ಆಹಾರದಲ್ಲಿ (Food) ಬಲವಾದ ವಿಷಕಾರಿ ಪದಾರ್ಥ ಇರೋದು ತಿಳಿದು ಬಂದಿದೆ. ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದ, ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದಾರೆ. ವಿಷ ಆಹಾರ ಸೇವಿಸಿ ಅನಾರೋಗ್ಯ ಆದಾಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಭಿಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ 4 ಕುಟುಂಬಸ್ಥರನ್ನು ರಿಮ್ಸ್ ಗೆ ತರಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಚಿಕಿತ್ಸೆ ನೀಡಿದರೂ ಬದುಕುಳಿದಿಲ್ಲ. ಆಸ್ಪತ್ರೆಗೆ ತರುವಾಗ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಪ್ರಸ್ತುತ ಮಲ್ಲಮ್ಮ ಕೋಮಾದಲ್ಲಿದ್ದಾರೆ, ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article