ಪತ್ತೇಪುರ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಯುವಕ‌ನ ಮೃತದೇಹ ಪತ್ತೆ..

K 2 Kannada News
ಪತ್ತೇಪುರ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಯುವಕ‌ನ ಮೃತದೇಹ ಪತ್ತೆ..
WhatsApp Group Join Now
Telegram Group Join Now

K2kannadanews.in

Heavy Rain ರಾಯಚೂರು : ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಪತ್ತೆಪೂರ ಗ್ರಾಮದ ಯುವಕನ ಮೃತದೇಹ ದೊರೆತಿದೆ.

ರಾಯಚೂರು ತಾಲ್ಲೂಕಿನ ಪತ್ತೇಪೂರ ಗ್ರಾಮದಲ್ಲಿ ಬಳಿಯ ಗೋಕುಲಸಾಬ ಹಳ್ಳ ದಾಟುತ್ತಿದ್ದ ವೇಳೆ 33 ವರ್ಷದ ಯುವಕ ಬಸವರಾಜ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದ. ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದೆ. ಮೊನ್ನೆ ರಾತ್ರಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿಹೋಗಿದ್ದ ಬ್ಯಾಂಕ್ ಉದ್ಯೋಗಿ 33 ವರ್ಷದ ಬಸವರಾಜ್ ಶವವಾಗಿ ಪತ್ತೆಯಾಗಿದ್ದಾರೆ. ಸತತ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿಹೋಗಿದ್ದ ಕೊಚ್ಚಿಹೋಗಿದ್ದ.

ನಿನ್ನೆ ಬೆಳಿಗ್ಗೆಯಿಂದ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.ಇಂದು ಬೆಳಿಗ್ಗೆ ನಾಪತ್ತೆಯಾದ ಕೊಂಚ ದೂರದಲ್ಲಿಯೇ ಪತ್ತೆಯಾಗಿರುವ ಯುವಕನ ಮೃತದೇಹ. ಘಟನೆ ಸಂಬಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

WhatsApp Group Join Now
Telegram Group Join Now
Share This Article