ಎಂ ಎಲ್ ಸಿ ಸ್ವಾಗತಕ್ಕೆ ಹಾಕಿದ್ದ ಕಮಾನು ಬಿದ್ದು ಮೂವರಿಗೆ ಗಾಯ..

K 2 Kannada News
ಎಂ ಎಲ್ ಸಿ ಸ್ವಾಗತಕ್ಕೆ ಹಾಕಿದ್ದ ಕಮಾನು ಬಿದ್ದು ಮೂವರಿಗೆ ಗಾಯ..
WhatsApp Group Join Now
Telegram Group Join Now

K2kannadanews.in

Arch fell three injured ಸಿಂಧನೂರು : ನೂತನ ವಿಧಾನ ಪರಿಷತ್ ಸದಸ್ಯ (MLC) ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ (Welcome) ಹಾಕಿದ್ದ ಕಬ್ಬಿಣದ ತಮ್ಮ ಕಮಾನೂ (Arch) ಕುಸಿತು ಮೂವರಿಗೆ (Injured) ಗಾಯವಾದ ಘಟನೆ ಸಿಂಧನೂರು (Sindhanur) ನಗರದಲ್ಲಿ ನಡೆದಿದೆ.

ಹೌದು ಇತ್ತೀಚಿಗಷ್ಟೇ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ, ಮೊದಲ ಬಾರಿಗೆ ಸಿಂಧನೂರಿಗೆ ಆಗಮಿಸುತ್ತಿರುವ ಬಸನಗೌಡ ಬಾದರ್ಲಿ ಅವರನ್ನು, ಅಭಿಮಾನಿಗಳು ಸ್ವಾಗತಿಸಲು ಬೃಹತ್ ಕಬ್ಬಿಣದ ಕಮಾನನ್ನು, ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ಹಾಕಿದ್ದರು. ಈ ವೇಳೆ ಗಾಳಿಗೆ ಕುಸಿದು ಬಿದ್ದ ಕಬ್ಬಿಣದ ಕಮಾನು ರಸ್ತೆಯ ಮೇಲೆ ಹೋಗುತ್ತಿದ್ದವರ ಮೇಲೆ ಬಿದ್ದಿದೆ.

ಕಬ್ಬಣದ ಕಮಾನು ವೀರಾಪುರದ ಯಮನಪ್ಪ, ಅಂಬಮ್ಮ, ಬೂದಿಹಾಳ ಕ್ಯಾಂಪಿನ ಚಿಟ್ಟಿಬಾಬುಗೆ ಎಂಬುವವರ ಮೇಲೆ ಬಿದ್ದಿದೆ. ಘಟನೆ ಆಗುತೇದಂತೆ ಸ್ಥಳದಲ್ಲಿ ಇದ್ದ ಸಾರ್ವಜನಿಕರು, ಕಂಬದ ಅಡಿಯಲ್ಲಿ ಸಿಲುಕಿದ್ದ ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಕೆಲ ಹೊತ್ತು ಆತಂಕದ ವಾತಾವರಣ ಉಂಟಾಗಿದ್ದು, ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು, ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ, ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ಕಮಾನುಗಳನ್ನು ಸ್ಥಳೀಯರ ಸಹಾಯದಿಂದ ತೆರವುಗೊಳಿಸಿದ್ದಾರೆ.

WhatsApp Group Join Now
Telegram Group Join Now
Share This Article