This is the title of the web page
This is the title of the web page

archive#lingayya

Local News

ಲೇಡಿ ಪಿಎಸ್ಐ ವರ್ಸಸ್ ರೈತ : ಸಾರ್ವಜನಿಕರ ಅಸಮಾಧಾನ

ರಾಯಚೂರು : ರೈತ ಟ್ರ್ಯಾಕ್ಟರ್ ನಲ್ಲಿ ಹುಲ್ಲು ತುಂಬಿಕೊಂಡು ಸಾಗುತ್ತಿದ್ದಂತ ವೇಳೆಯಲ್ಲಿ, ಪೊಲೀಸ್ ಜೀಪ್ ಗೆ ಟಚ್ ಆಗಿದೆ. ಇಷ್ಟಕ್ಕೆ ಕಿರಿಕ್ ತೆಗೆದಂತ ಮಹಿಳಾ ಪಿಎಸ್‌ಐ, ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡು, ಪೊಲೀಸ್ ಠಾಣೆಗೆ ಕರೆದೊಯ್ದು ದರ್ಪ ಮೆರೆದಿರೋ ಆರೋಪ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹುಲ್ಲಿನ ಮೇವು ಲೋಡ್ ಮಾಡಿಕೊಂಡು ರೈತ ಲಿಂಗಯ್ಯ ಎಂಬುವರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದಂತ ಟ್ರ್ಯಾಕ್ಟರ್ ಪೊಲೀಸ್ ಜೀಪ್ ಗೆ ಡಿಕ್ಕಿಯಾಗಿದೆ. ಇಷ್ಟಕ್ಕೆ ಸಿರಿವಾರ ಠಾಣೆ ಮಹಿಳಾ ಪಿಎಸ್‌ಐ ಗೀತಾಂಜಲಿ ಎಂಬುವರು ರೈತನ ಮೇಲೆ ದರ್ಪ ಮೆರೆದಿರೋದಾಗಿ ಹೇಳಲಾಗುತ್ತಿದ್ದೆ. ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡಂತ ಸಿರವಾರ ಠಾಣೆಯ ಪಿಎಸ್‌ಐ ಗೀತಾಂಜಲಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪಿಎಸ್‌ಐ ನಡುವೆ ಮಾತಿನ ಚಕಮಕಿ ಕೂಡ ಉಂಟಾಗಿದೆ. ಇದರಿಂದ ಕೋಪಗೊಂಡಂತ ಅವರು...