ಮಾನವಿ : ನೈಜ ಫಲಾನುಭವಿಗಳನ್ನು ಗುರುತಿಸದೆ ಬೇಕಾಬಿಟ್ಟಿಯಾಗಿ ಮಧ್ಯವರ್ತಿಗಳ ಹಾವಳಿಗೆ ತುತ್ತಾಗಿ ಬಂಜರು ಭೂಮಿ,ಉಪ್ಪಿನ ಅಂಶ,ಕೆರೆ ಗುಡ್ಡ, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ವಿತರಣೆ ಮಾಡಿ ರೈತರನ್ನು ಇನ್ನೂ...
ರಾಯಚೂರು : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಲ್ಲಿ 1 ಸಾವಿರಕ್ಕೂ ಹೆಚ್ಚು ರೈತರಿಗೆ ಸಾಲವನ್ನು ನೀಡಲಾಗಿದೆ. ರೈತರು ನಿಗದಿತ ಸಮಯದಲ್ಲಿ ಸಾಲ ಮರು ಪಾವತಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಸ್.ಎಲ್.ಡಿ. ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ ಹೇಳಿದರು. ರೈತರಿಗೆ ವಾರ್ಷಿಕ ಶೇ.3 ರ ಅತಿ ಕಡಿಮೆ ಬಡ್ಡಿದರದಲ್ಲಿ ಷರತ್ತುಗಳಿಗೆ ಒಪ್ಪಿ ಸಾಲ ಪಡೆದ ರೈತರು ನಿಗದಿತ ಕಾಲಕ್ಕೆ ಮರುಪಾವತಿ ಮಾಡದೇ ಹೋದರೆ ಅದು 24 ಪ್ರತಿಶತವಾಗಿ ಇದರಿಂದ ರೈತರು ಅನಾವಶ್ಯವಾಗಿ ಆರ್ಥಿಕ ತೊಂದರೆಗಳಿಗೆ ಸಿಲುಕಿಕೊಳ್ಳುವುದಲ್ಲದೆ ಇತರ ರೈತರಿಗೂ ಶೇ.3 ರ ಬಡ್ಡಿದರದಲ್ಲಿ ಸಾಲ ಸಿಗದಂತೆ ಮಾಡುತ್ತಾರೆ. ರಾಯಚೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನಲ್ಲಿ ಮಾ.31.2022 ರ ವೇಳೆಗೆ 1179 ಸದಸ್ಯರಿಗೆ ಸಾಲ ವಿತರಿಸಿದ್ದು, 259 ಲಕ್ಷ ರೂ. ಬಾಕಿ ಬರುವುದಿದೆ ಎಂದು ಸಾಲ ವಸೂಲಾತಿ ಶೇ.10.53 ಆಗಿದೆ...