K2 ಪೊಲಿಟಿಕಲ್ ನ್ಯೂಸ್ : ದೇಶಾದ್ಯಂತ ಕಾಂಗ್ರೆಸ್ ಪಕ್ಷದವರು ಅಲ್ಪಸಂಖ್ಯಾತರ ಮೇಲೆ ತಮಗೆ ಹೆಚ್ಚು ಪ್ರೀತಿ ಕಾಳಜಿ ಇದೆ. ಬಿಜೆಪಿ ಪಕ್ಷಕ್ಕೆ ಅವರ ಮೇಲೆ ಕಾಳಜಿ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಹೌದು ಅಲ್ಪಸಂಖ್ಯಾತ ಸಮುದಾಯದ ಮೇಲೆ ನಮಗಷ್ಟೇ ಪ್ರೀತಿ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಾರೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತೀ ಅರ್ಜಿಗೂ ಶುಲ್ಕ ಪಡೆಯಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಶುಲ್ಕವನ್ನು ರದ್ದುಗೊಳಿಸಿತು. ಇದರಿಂದ ಬಡವರಿಗೂ ಸಹಾಯವಾಯಿತು. ಹಜ್ ಯಾತ್ರೆಗೆ 50000 ರೂ. ಕಡಿತಗೊಳಿಸಲಾಗಿದ್ದು, ದೇಶದ 21,000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ 280 ಕೋಟಿ ರೂ. ಅನುದಾನ ನೀಡಲಾಗಿದೆ ಎಂದಿದ್ದಾರೆ.
[ays_poll id=3]