ಬಿ.ಯದ್ಲಾಪುರ, ಬಟ್ಟೆ ತೊಳೆಯಲು ಹೋದವರು ನೀರು ಪಾಲು : ತಾಯಿ ಮಗು ಶವ ಪತ್ತೆ..

K 2 Kannada News
ಬಿ.ಯದ್ಲಾಪುರ, ಬಟ್ಟೆ ತೊಳೆಯಲು ಹೋದವರು ನೀರು ಪಾಲು : ತಾಯಿ ಮಗು ಶವ ಪತ್ತೆ..
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಗ್ರಾಮದ ಹೊರ ವಲಯದಲ್ಲಿರುವ ಕಾಲುವೆಗೆ, ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳು ನಾಪತ್ತೆಯಾದ ಘಟನೆ ಸಂಬಂದಿಸಿದಂತೆ ತಾಯಿ ಮಗು ಶವ ಪತ್ತೆಯಾಗಿದೆ.

ರಾಯಚೂರು ತಾಲೂಕಿನ ಬಿ.ಯದ್ಲಾಪೂರ ಗ್ರಾಮದಲ್ಲಿ ನಡೆದಿದೆ. ತಾಯಿ ಸುಜಾತಾ ( 33) ಹಾಗೂ ಮಗಳು ಶ್ರಾವಣಿ (11) ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ ಮನೆಯಲ್ಲಿನ ಬಟ್ಟೆಗಳನ್ನು ತೆಗೆದುಕೊಂಡು ಗ್ರಾಮದ ಹೊರವಲಯದ ಕಾಲುವೆಗೆ ತೊಳೆಯಲು ಹೊಗಿದ್ದರು. ಈ ವೆಳೆ ಕಾಲುವೆ ಬಳೊಯಿಂದ ನಾಪತ್ತೆಯಾಗಿದ್ದರು. ಇನ್ನೂ ತುಂಬಾ ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಬಂದು ಹುಡುಕಾಟ ನಡೆಸಿದಾಗ ಸ್ಥಳದಲ್ಲಿ ಕಂಡಿಲ್ಲ. ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿತ್ತು. ತಾಯಿ-ಮಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆದಿದ್ದರು.

ನಿನ್ನೆ ಸಂಜೆ ತಾಯಿ ಸುಜಾತ ಶವ ಪತ್ತೆಯಾಗಿತ್ತು. ಆದರೇ ಶ್ರಾವಣಿ ಶವಕ್ಕಾಗಿ ಶೋಧಕಾರ್ಯ ನಡೆದದಿತ್ತು. ರಾತ್ರಿ ಕತ್ತಲಾದ ಕಾರಣ ಶೋಧಕಾರ್ಯ ಸ್ಥಗಿತಗೊಳಿಸಿ, ಬೆಳಿಗ್ಗೆ ಮತ್ತೆ ಹುಡುಕಾಟ ಆರಂಬಿಸಲಾಗಿತ್ತು, ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಾಲಕಿ ಶವ ಪತ್ತೆ ಮಾಡಲಾಯಿರು. ಈ ವೇಳೆ ಕುಟುಂಬಸ್ಥರ ಆಕ್ತಂದನ ಮುಗಿಲು ಮುಟ್ಟಿತ್ತು. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article