ರಾಯಚೂರು ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

K 2 Kannada News
ರಾಯಚೂರು ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
WhatsApp Group Join Now
Telegram Group Join Now

K2kannadanews.in

Local news ರಾಯಚೂರು : ಸಂಜೆ 4 ಗಂಟೆಯಿಂದ 6  ಗಂಟೆಯವರೆಗೆ ಬಸ್ಸಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ರಾಯಚೂರು ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಹೋಗಿದೆ. ಈ ಬಗ್ಗೆ ನಿಲ್ದಾಣದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ದೂರಾಗಿದೆ.

ಹೌದು ರಾಯಚೂರು ನಗರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ರಾಯಚೂರಿನಿಂದ ಲಿಂಗಸುಗೂರು ಮತ್ತು ಸಿಂಧನೂರು ಮಾರ್ಗಕ್ಕೆ ಬಸ್ಸುಗಳ ಇಲ್ಲದೆ, ಸಾವಿರಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 6 ಗಂಟೆಯ ವೇಳೆಗೆ ಆಗೊಂದು ಹೀಗೊಂದು ಬರುವ ಬಸ್ಸಿಗೆ ಪ್ರಯಾಣಿಕರು ಸೀಟು ಹಾಕಲು ಉಂಟಾಗುತ್ತಿದೆ.

ಇನ್ನು ಹಲವು ಬಾರಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇರುವಂತಹ ಅಧಿಕಾರಿಗಳೊಂದಿಗೆ ಜಗಳವಾಡಿದರು ಕೂಡ ಯಾವುದೇ ಪ್ರಯೋಜನೆ ಆಗಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರಯಾಣಿಕರು ಇಲ್ಲದಿದ್ದರೂ ಕೂಡ ಕಾಲಿ ಬಸ್ಸುಗಳು ಒಂದರಿಂದ ಒಂದು ಹೋಗುತ್ತವೆ. ಪ್ರಯಾಣಿಕರು ಓಡಾಡುವ ಸಂದರ್ಭದಲ್ಲಿ ಯಾವುದೇ ಬಸ್ ಗಳು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಹಿತ ಗಮನಹರಿಸಿ ಬಸ್ ಗಳ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ.

WhatsApp Group Join Now
Telegram Group Join Now
Share This Article