K2kannadanews.in
Political News ರಾಯಚೂರು : 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ರು ಅದರಲ್ಲಿ ಕೇವಲ ಶೇಕಡಾ 7 ತನಿಖೆಯಾಗುತ್ತಿವೆ, ಸರ್ಕಾರದ ಹಣ, ರಾಜ್ಯದ ಹಣ 1 ಲಕ್ಷ 40 ಸಾವಿರ ಕೋಟಿ ಆಗಿದೆ ಹಾಗಾಗಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಸಚಿವ ಎನ್.ಎಸ್.ಬೋಸರಾಜು ಹುಟ್ಟುಹಬ್ಬ ಹಿನ್ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ವೇಳೆ ರಾಯಚೂರಿನಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾಧ್ಯಮದೊಂದಿಗೆ ಮಾತನಾಡುತ್ತಾ. ಅಕ್ರಮ ಗಣಿಗಾರಿಕೆ ಕುರಿತು ಸಿಎಂಗೆ 7 ಪುಟಗಳ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ ರಾಜ್ಯದ ಸೇವೆ ಆಗಬೇಕು ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬೇಕು ಅನ್ನೋ ಕಾರಣಕ್ಕೆ ಪತ್ರ ಬರೆದಿದ್ದೇನೆ. ಅದನ್ನ ರಾಜ್ಯದ, ನಮ್ಮ ಜನರ ಹಿತದೃಷ್ಟಿಯಿಂದ ಬರೆದಿದ್ದೇನೆ. ಸಿಎಂ ಗೆ ಈಗಾಗಲೇ ಪತ್ರ ತೋರಿಸಿದ್ದೇನೆ ಅವರು ಗಂಭೀರವಾಗಿ ತೆಗೆದುಕೊಳ್ತಾರೆ. ಕಾರಣ 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ರು ಅದರಲ್ಲಿ ಕೇವಲ ಶೇಕಡಾ 7 ತನಿಖೆಯಾಗುತ್ತಿವೆ. 7 ರಲ್ಲಿ 2% ಅಂದ್ರೆ ಒಟ್ಟು ಪ್ರಕರಣದಲ್ಲಿ 0.2% ತೀರ್ಪು ಬಂದಿವೆ. ಅದಕ್ಕೆ ತಾರ್ಕಿಕ ಅಂತ್ಯ ಕೊಡಬೇಕಲ್ಲ. ಸರ್ಕಾರದ ಹಣ, ರಾಜ್ಯದ ಹಣ 1 ಲಕ್ಷ 40 ಸಾವಿರ ಕೋಟಿ ಆಗಿದೆ. ಆದ್ದರಿಂದ ನಾವು ಗಂಭೀರವಾಗಿ ಪರಿಗಣಿಸುವ ಉದ್ದೇಶದಿಂದ ಸಿಎಂಗೆ ಪತ್ರ ಬರೆದಿದ್ದೇನೆ ಎಂದರು.
ಸಿಬಿಐ ನವರಿಗೆ ನಾವು 9 ಪ್ರಕರಣ ವಹಿಸಿದ್ದೇವೆ ಅದರಲ್ಲಿ 3 ಪ್ರಕರಣ ಬಿಟ್ಟು 6 ಪ್ರಕರಣ ನಾವು ಮಾಡಲ್ಲ ಅಂತ ಕಳುಹಿಸಿದ್ದಾರೆ. ಎಸ್ ಐಟಿ ನಲ್ಲಿ ಬಹುಭಾಗ ಪ್ರಕರಣಗಳು ತನಿಖೆಯಾಗಿಲ್ಲ. ಆ ಉದ್ದೇಶದಿಂದ ಸಿಎಂ ಗೆ ಪತ್ರ ಬರೆದಿದ್ದೇನೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.