ರೈತರಿಗೆ ಹಾಲು ಒಕ್ಕೂಟ ಬರೆ : ಪ್ರತಿ ಲೀಟರ್ ಹಾಲಿನ ದರ 1.50 ರೂ ಇಳಿಕೆ..

K 2 Kannada News
ರೈತರಿಗೆ ಹಾಲು ಒಕ್ಕೂಟ ಬರೆ : ಪ್ರತಿ ಲೀಟರ್ ಹಾಲಿನ ದರ 1.50 ರೂ ಇಳಿಕೆ..
WhatsApp Group Join Now
Telegram Group Join Now

K2kannadanews.in

Reduced milk prize ರಾಯಚೂರು: ಇತ್ತೀಚಿಗೆ ರಾಜ್ಯ ಸರ್ಕಾರ ಹಾಲಿನ ದರವನ್ನ ಏರಿಸುವ ಮೂಲಕ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕ ಒಕ್ಕೂಟ ರೈತರಿಗೆ ಬರೆ ಎಳೆಯುವ ಕೆಲಸಕ್ಕೆ ಮುಂದಾಗಿದ್ದು ರೈತರು ಅಸಮಧಾನ ಹೊರಹಾಕುತ್ತಿದ್ದಾರೆ.

ಹೌದು ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ ಕಡಿತ ಮಾಡಿ ಆದೇಶ ಹೊರಡಿಸಿದೆ. ಪ್ರತಿ ಲೀಟರ್ ಹಾಲಿನ ದರವನ್ನು 1.50 ರೂಪಾಯಿನಂತೆ ಇಳಿಸಿ ಆದೇಶ ಹೊರಡಿಸಿದೆ. ಇದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.

ಆದರೇ ಒಕ್ಕೂಟಕ್ಕೆ ಆರ್ಥಿಕ ಸಂಕಷ್ಟವಿದೆ ಹಗಾಗಿ ಹಾಲು ಉತ್ಪಾದಕರಿಗೆ ನಿಡುವ ದರದಲ್ಲಿ 1.50 ರೂ ಕಡಿತ ಮಡಲಾಗಿದೆ ಎಂದು ಒಕ್ಕುಟ ಸಮಜಾಯಿಷಿ ನೀಡುತ್ತಿದೆ. ಇದರಿಂದ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕ ರೈತರು ಪ್ರತಿಭಟನೆಗೆ ಮುಂದಾಗಿದ್ದು, ತಕ್ಷಣ ದರ ಇಳಿಕೆ ಮಾಡಿರುವ ಕ್ರಮ ಒಕ್ಕೂಟ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Share This Article