This is the title of the web page
This is the title of the web page
Local News

ಲಂಚ ನೀಡಿದ ಟೆಂಡರ್‌ದಾರರಿಗೆ ಮಾತ್ರ ಕೃಷಿ ಪರಿಕರಗಳ ಪೂರೈಕೆ ಕಾರ್ಯಾದೇಶ


ರಾಯಚೂರು : ಕೃಷಿ ಹಾಗೂ ತೋಟಗಾರಿಕೆಯ ಕೃಷಿ ಉಪಕರಣಗಳ ವಿತರಣೆಯಲ್ಲಿ ಶೇ 46 ಪರ್ಸೆಂಟ್ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಗಂಭೀರ ಆರೋಪ ಮಾಡಿದರು.

ಸರಕಾರ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಲು 350 ಕೋಟಿ ರೂ ನಿಗದಿ ಮಾಡಿದೆ. ಜಿಲ್ಲೆಯೊಂದಕ್ಕೆ ಪರಿಕರಗಳನ್ನು ಪೂರೈಕೆ ಮಾಡಲು 5 ಲಕ್ಷ ರೂ. ಲಂಚ ಕೊಡಬೇಕಂತೆ ಅಂದರೆ ಅಲ್ಲಿಗೆ 1.50 ಕೋಟಿ ರೂ. ಆಯಿತು. ಉಳಿದ ಹಣದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ಕೊಡುವುದಕ್ಕೆ ಸಾಧ್ಯವೇ? ಹೀಗಾದರೆ ಕೃಷಿ ಉಳಿಯುವುದಾದರೂ ಹೇಗೆ. ಸರಕಾರದ ನಿಯಮಗಳನ್ನು ಪಾಲಿಸದ 350 ಜನರಲ್ಲಿ ಕೇವಲ 8-9 ಜನ ಮಾತ್ರವೇ ಕೃಷಿ ಪರಿಕರಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ ಎಂದು ಅವರು ಹೇಳಿದರು.

ನನಗೆ ಅನಾಮಧೇಯ ಅಪರಿಚತರೊಬ್ಬರ ನೀಡಿದ ಮಾಹಿತಿಯನ್ವಯ ಕೃಷಿ ಆಯುಕ್ತರಿಗೆ 20, ನಿರ್ದೇಶಕರಿಗೆ 20 ಹಾಗೂ ಸಚಿವರಿಗೆ 6 ಪರ್ಸೆಂಟ್ ನೀಡಿದ ಟೆಂಡರ್‌ದಾರರಿಗೆ ಮಾತ್ರವೇ ಕೃಷಿ ಪರಿಕರಗಳನ್ನು ಪೂರೈಕೆ ಮಾಡಲು ಕಾರ್ಯಾದೇಶ ನೀಡಲಾಗುತ್ತಿದೆ ಎಂದು ತಿಳಿದು ಬಂದಿದ್ದು ಲಂಚದ ವ್ಯವಹಾರವನ್ನು ಮಂಜುನಾಥ ಪಾಟೀಲ ಮುಂಡರಗಿ ಹಾಗೂ ಮಹಾಂತೇಶ ಜಮಖಂಡಿ ಎನ್ನುವವರು ನಿಬಾಯಿಸುತ್ತಿರುವುದಾಗಿ ಸಂಸ್ಥೆಯೊಂದು ಆರೋಪಿಸಿದೆ ಎಂದು ತಿಳಿಸಿದರು. ಈ ಕುರಿತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


[ays_poll id=3]