ರಾಯಚೂರು : ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಕೃಷ್ಣ ರೈಲು ನಿಲ್ದಾಣದ ಬಳಿ ಯುವಕ ಯುವತಿ ಶವಗಳು ಪತ್ತೆಯಾಗಿದ್ದು ಪ್ರೇಮಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಕೃಷ್ಣ ರೈಲು ನಿಲ್ದಾಣದ ಹತ್ತಿರದ ರೈಲ್ವೆ ಟ್ರ್ಯಾಕ್ ನಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದು. ರೈಲ್ವೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಮ್ಮಿಗನೂರು ಮೂಲದ 26 ವರ್ಷದ ಶಿವಕುಮಾರ್, 16 ವರ್ಷದ ಅನಿತಾ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರೈಲು ಬರುವ ಸಮಯ ನೋಡಿಕೊಂಡು ಇಬ್ಬರೂ ಕೂಡ ಜೋಡಿಯಾಗಿಯೇ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
https://youtu.be/d2lfFXa6RXo
ರೈಲ್ವೆ ಪೊಲೀಸರು ಈ ಒಂದು ಮೃತ ದೇಹಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಂಬಂಧಪಟ್ಟ ರೈಲ್ವೆ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
[ays_poll id=3]