K2kannadanews.in
Crime News ರಾಯಚೂರು : ನಡು ರಸ್ತೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯಚೂರು ನಗರದ ಚೌಡಮ್ಮ ಕಟ್ಟೆ ಬಳಿ ನಡೆದಿದೆ.
ಹೌದು ರಾಯಚೂರು ನಗರದ ಚೌಡಮ್ಮ ಕಟ್ಟೆ ಬಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ. ಜಂಬಣ್ಣ ರಾಮಸ್ವಾಮಿ ಲೋಕಾ ಬಲೆಗೆ ಬಿದ್ದ ಹೋಮ್ ಗಾರ್ಡ್ ಕಮಾಂಡೆಂಟ್ ಎಂದು ತಿಳಿದು ಬಂದಿದೆ. ಇಡಪನೂರು ಸ್ಟೇಷನ್ ಗೆ ಡ್ಯೂಟ್ ಮಾಡಿಕೊಡಲು ಮಾರೆಬ್ಬ ಎಂಬ ಸಿಬ್ಬಂದಿಗೆ 7000 ಕ್ಕೆ ಬೇಡಿಕೆ ಇಟ್ಟಿದ್ದರು. 2000 ಸಾವಿರ ನೀಡಿದ್ದ ಮಾರೆಪ್ಪ ಲೊಕಾಯುಕ್ತಕ್ಕೆ ದೂರು ನೀಡಿದ್ದ. ಕಳೆದ ರಾತ್ರಿ ನಗರದ ಚೌಡಮ್ಮ ಬಂದು ಉಳಿದ 5000 ಪಡೆಯುವಾಗ, ಲೊಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೊಕಾಯುಕ್ತ ಪೊಲೀಸ್ ಅಧಿಕ್ಷಕರಾದ ಸತೀಷ್ ಚಿಟುಗುಪ್ಪಿ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಕಾಳಪ್ಪ ಬಡಿಗೇರ್, ರವಿ ಪುರುಷೋತ್ತಮ ಹಾಗೂ ಸಿಬ್ಬಂದಿಗಳು ದಾಳಿ ಜಂಬಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಲೊಕಾ ಇನ್ಸ್ ಪೆಕ್ಟರ್ ಕಾಳಪ್ಪ ಬಡಿಗೇರ್ ಅವರು ಈ ಒಂದು ಪ್ರಕರಣದ ಬಗ್ಗೆ ತನಿಕೆ ಮುಂದುರೆಸಿದ್ದಾರೆ.