This is the title of the web page
This is the title of the web page
Local News

ಜೆಸಿಬಿ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ ಆಮ್ ಆದ್ಮಿಗೆ ಬೆಂಬಲಿಸುತ್ತಾರೆ ಜನ


ರಾಯಚೂರು : ನನ್ನ ಉಸಿರು ಇರುವವರೆಗೂ ಗ್ರಾಮೀಣ ಮತ ಕ್ಷೇತ್ರ ಬಿಟ್ಟು ಹೋಗಲಾರೆ ಸೋಲು ಗೆಲವು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಗ್ರಾಮೀಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಕ್ಷಿ ಡಾ.ಸುಭಾಷಚಂದ್ರ ಸಬಾಜಿ ಹೇಳಿದರು.

ನಾನು ಬೇರೆ ದೇಶದಿಂದ ಬಂದವನಲ್ಲ ನಾನು ಕರ್ನಾಟಕದ ಪಕ್ಕದ ಬೀದರ್ ಜಿಲ್ಲೆಯವರು ರಾಯಚೂರು ಜಿಲ್ಲೆಯಲ್ಲಿ 20 ವರ್ಷಗಳ ಕಾಲ ಸರ್ಕಾರಿ ಸೇವಕನಾಗಿ ಕೆಲಸ ಮಾಡಿದ್ದೇನೆ ಜಿಲ್ಲೆಯ ಜನರ ಜೊತೆ ಬಹಳಷ್ಟು ಒಡನಾಟ ಹೊಂದಿದ್ದೇನೆ ನನಗೆ ಆಗದಿರುವವರು ಚುನಾವಣೆ ನಂತರ ವಾಪಸ್ ಬೀದರ್ ಗೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರಂತೆ ಅದನ್ನ ಕೇಳಿಮನಸ್ಸಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಸತ್ಯ ಹೇಳುತ್ತೇನೆ ನನ್ನ ಉಸಿರು ಇರುವವರೆಗೂ ರಾಯಚೂರು ಗ್ರಾಮೀಣ ಮತ ಕ್ಷೇತ್ರದಲ್ಲಿ ಇರುತ್ತೇನೆ ಕ್ಷೇತ್ರದ ಜನತೆಯನ್ನು ಬಿಟ್ಟು ಹೋಗುವುದಿಲ್ಲ. 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಲು ಗೆಲುವು ಸಮಾನವಾಗಿ ಕರಿಸುತ್ತೇನೆ. ಪ್ರಾಣ ಇರುವವರೆಗೂ ಜನರ ಸೇವೆ ಮಾಡುತ್ತೇನೆ ಎಂದರು.

ರಾಯಚೂರು ಗ್ರಾಮೀಣ ಮತಕ್ಷೇತ್ರ ಎಸ್.ಟಿ ಮೀಸಲು ಕ್ಷೇತ್ರವಾಗಿದ್ದರಿಂದ ನನಗೆ ಸ್ಪರ್ಧೆ ಮಾಡಲು ಅವಕಾಶವಿದುದ್ದರಿಂದ ಹಾಗೂ ಜನರ ಸೇವೆ ಮಾಡಲು ಇದೊಂದು ಅವಕಾಶ ಎಂದು ಭಾವಿಸಿಕೊಂಡು ಈ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೆ ಎಂದ ಅವರ ಬಿಜೆಪಿ ಶೇ40 ಲಂಚಗುಳಿತನ ಕಾಂಗ್ರೆಸ್,ಜೆಡಿಎಸ್ ಶೇ 2 ರಷ್ಟು ಲಂಚಗುಳಿತದಿಂದ ಭ್ರಷ್ಟ ಪಕ್ಷಗಳಾಗಿ ದಿನ ದಿನಕ್ಕೆ ಜನರಿಂದ ಬೇಸತ್ತು ಹೋಗಿವೆ. ಅರವಿಂದ್ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷ ಯಾವುದೇ ಭ್ರಷ್ಟಾಚಾರ ಲಂಚ ರೂಪದಲ್ಲಿ ಮುಳುಗಿಲ್ಲ ದೆಹಲಿ ಮತ್ತು ಪಂಜಾಬ ರಾಜ್ಯಗಳಲ್ಲಿ ಸರಕಾರ ಚೆನ್ನಾಗಿ ನಡೆದುಕೊಂಡು ಹೋಗುತ್ತಿವೆ ಎಂದರು.


[ays_poll id=3]