This is the title of the web page
This is the title of the web page
Local News

ಜನಾರ್ದನ್ ರೆಡ್ಡಿ ನೂತನ ಪಕ್ಷದ ಲಾಂಛನ ಬಿಡುಗಡೆ


ಸಿಂಧನೂರು : ಜನವರಿ ಆರರಂದು ಜನಾರ್ದನ್ ರೆಡ್ಡಿ ಅವರ ಸ್ಥಾಪಿಸಿರುವಂತಹ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಪಕ್ಷದ ಮುಖಂಡ ಮಲ್ಲಿಕಾರ್ಜುನ್ ತಿಳಿಸಿದರು.

ಜನವರಿ ಆರರಂದು ಸಿಂಧನೂರಿಗೆ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿ ಅವರು ಆಗಮಿಸುತ್ತಿದ್ದು ಸಿಂಧನೂರಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಮುಖಂಡರು ಆಗಮಿಸುತ್ತಿದ್ದು ಕಾರ್ಯಕ್ರಮದ ನಿಮಿತ್ಯ ಸ್ತ್ರೀಶಕ್ತಿ ಭವನದಿಂದ ಅಂಬೇಡ್ಕರ್ ಭವನದ ಅವರಿಗೆ ಮೆರವಣಿಗೆ ಕಾರ್ಯಕ್ರಮ, ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗಿದೆ ಎಂದು ಹೇಳಿದರು.


[ays_poll id=3]