ನಾನು ಹಿಂದಿ ಕಲಿತಿಲ್ವಾ, ನೀನು ಕನ್ನಡ ಕಲಿಬೇಕಪ್ಪ..

K 2 Kannada News
ನಾನು ಹಿಂದಿ ಕಲಿತಿಲ್ವಾ, ನೀನು ಕನ್ನಡ ಕಲಿಬೇಕಪ್ಪ..
WhatsApp Group Join Now
Telegram Group Join Now

K2kannadanews.in

Political News ಸಿಂಧನೂರು : ಸಿಂಧನೂರು ರೈಲು ಮಾರ್ಗ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ರೈಲ್ವೆ ಅಧಿಕಾರಿಗೆ ಕೇಂದ್ರ ಸಚಿವ ಸೋಮಣ್ಣ ಕನ್ನಡ ಕರೆಯುವಂತೆ ಬುದ್ಧಿವಾದ ಹೇಳಿದ ಘಟನೆ ನಡೆಯಿತು.

ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ರೈಲು ನಿಲ್ದಾಣದಲ್ಲಿ ಇಂದು ಸಿಂಧನೂರು ರಾಯಚೂರು 81 ಕಿಲೋಮೀಟರ್ ನೂತನ ಮಾರ್ಗ ಕಾಮಗಾರಿ ಯೋಜನೆಗೆ ಚಾಲನೆ ನೀಡಿ ವೇದಿಕೆ ಮೇಲೆ ಮಾತನಾಡುತ್ತಿದ್ದ ವೇಳೆ, ರೈಲ್ವೆ ಇಲಾಖೆಯ ಕಿರಿಯ ಇಂಜಿನೆಯರ್ ಅವರನ್ನು ಕರೆದಾಗ ಕನ್ನಡ ಬರುತ್ತಾ ಎಂದು ಕೇಳಿದ್ದಾರೆ, ಅಧಿಕಾರಿ ಇಲ್ಲ ಎಂದು ಹೇಳಿದಾಗ ನಾನು ಆರು ತಿಂಗಳಲ್ಲಿ ಹಿಂದಿ ಕಲಿತಿದ್ದೇನೆ ನೀವು ಕನ್ನಡ ಕಲಿಯಬೇಕು ಎಂದು ಹೇಳಿದರು.

WhatsApp Group Join Now
Telegram Group Join Now
Share This Article