K2 ಪೊಲಿಟಿಕಲ್ ನ್ಯೂಸ್ : ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನೂ ಸಹ ಹಿಂದೂನೇ, ಯಾವುದೇ ಧರ್ಮದಲ್ಲೂ ಕೊಲೆ, ಹಿಂಸೆಗೆ ಪ್ರೋತ್ಸಾಹವಿಲ್ಲ. ಇದಕ್ಕೆಲ್ಲ ಪ್ರೋತ್ಸಾಹ ಇರೋದು ಕೇವಲ ಹಿಂದುತ್ವದಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಹೌದು ನಾನು ಎಂದಿಗೂ ಕೂಡ ಹಿಂದೂ ಧರ್ಮವನ್ನು ವಿರೋಧ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಅವರು, ನಾನು ಕೂಡ ಹಿಂದೂ, ಯಾವ ಧರ್ಮದಲ್ಲೂ ಕೂಡ ಕೊಲೆ ಮಾಡಿ, ಹಿಂಸೆ ಮಾಡಿ ಎಂದು ಹೇಳಿಲ್ಲ. ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡುವವರು ನಮಗೆ ಕೂಡ ಕ್ರೌರ್ಯಕ್ಕೆ, ಹಿಂಸೆಗೆ ಅವಕಾಶ ಇಲ್ಲ ಎಂದಷ್ಟೆ ನಾನು ಹೇಳಿದ್ದೆ. ನಾನು ಯಾವತ್ತೂ ಹಿಂದು ಧರ್ಮ ವಿರೋಧಿಸಿಲ್ಲ. ಸಾಮರಸ್ಯ ಹಾಳು ಮಾಡುವುದೇ ಬಿಜೆಪಿ ನಾಯಕರ ಕೆಲಸ ಎಂದು ಕಿಡಿಕಾರಿದ್ದಾರೆ.
[ays_poll id=3]