K2kannadanews.in
IPL News ಬೆಂಗಳೂರು : ಐಪಿಎಲ್ ಟ್ರೋಫಿ ಹಿಡಿದು ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಸಂಭ್ರಮಾಚರಣೆ ವೇಳೆ ಕಾಲ್ತುಳಿತವಾಗಿದ್ದು ಆರ್ ಸಿ ಬಿ ಅಭಿಮಾನಿಗಳ ಸಾವನ್ನಪ್ಪಿದ ಸಂಖ್ಯೆ 11ಕ್ಕೆ ಏರಿದೆ ಎನ್ನಲಾಗುತ್ತಿದೆ.
ಹೌದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಟ್ ನಂ.12 ರಲ್ಲಿ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ ಎನ್ನಲಾಗುತ್ತಿದೆ. ಈ ವೇಳೆ ಕೆಲ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಗಂಬೀರ ಸ್ವರೂಪ ಪಡೆಯುತ್ತಿದ್ದ ಕಾರಣ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕಾಲ್ತುಳಿತದಲ್ಲಿ ಯುವಕನೊಬ್ಬನಿಗೆ ಕಾಲು ಮುರಿತವಾಗಿದೆ.