ಪಾಟ್ನಾ : ಭಾರತ್ ಬಂದ್ ವೇಳೆ ಲಾಠಿಚಾರ್ಜ್, ಡಿಸಿಗೆ ಬಿತ್ತು ಲಾಠಿ ಏಟು..

K 2 Kannada News
ಪಾಟ್ನಾ : ಭಾರತ್ ಬಂದ್ ವೇಳೆ ಲಾಠಿಚಾರ್ಜ್, ಡಿಸಿಗೆ ಬಿತ್ತು ಲಾಠಿ ಏಟು..
WhatsApp Group Join Now
Telegram Group Join Now

K2kannadanews.in

BHARAT BANDH ಪಾಟ್ನಾ : ಸುಪ್ರೀಂ ಕೋರ್ಟ್ ಮೀಸಲಾತಿ ತೀರ್ಪು ವಿರೋಧಿಸಿ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಈ ವೇಳೆ ಪಾಟ್ನಾದಲ್ಲಿ ಪ್ರತಿಭಟನೆ ವೇಳೆ ಗದ್ದಲ ಉಂಟಾಗಿ ಲಾಠಿ ಚಾರ್ಜ ಮಾಡಲಾಯಿತು. ಈ ವೇಳೆ ರಸ್ತೆ ಮದ್ಯ ನಿಂತಿದ್ದ ಜಿಲ್ಲಾಧಿಕಾರಿಗೆ ಪೇದೆ ಲಾಠಿಯಿಂದ ಹೊಡೆದ ವಿಡಿಯೋ ವೈರಲ್ ಆಗಿದೆ.

ಹೌದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪ್ರತಿಭಟನೆಯ ಅಂಗವಾಗಿ ಜನನಿಬಿಡ ರಸ್ತೆಯಲ್ಲಿ ಜಮಾಯಿಸಿದ್ದು, ಬಂದ್ ಬೆಂಬಲಿಗರ ಮೆರವಣಿಗೆ ಗಾಂಧಿ ಮೈದಾನದಿಂದ ಮುಂದೆ ಸಾಗುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಈ ಸಂದರ್ಭ ಪೊಲೀಸರು ಜಿಲ್ಲಾಧಿಕಾರಿಗೆ ದೊಣ್ಣೆಯಿಂದ ಹೊಡೆದಿರುವ ವಿಲಕ್ಷಣ ಘಟನೆ ನಡೆದಿದೆ. ಎಸ್‌ಡಿಎಂ ಶ್ರೀಕಾಂತ್ ಕುಂಡ್ಲಿಕ್ ಖಂಡೇಕರ್ ಅವರು ರಸ್ತೆಯ ಮಧ್ಯದಲ್ಲಿ ನಿಂತಿದ್ದರು. ಇದೇ ಸಂದರ್ಭ ಆಕ್ರೋಶಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಪ್ರಯಾಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

WhatsApp Group Join Now
Telegram Group Join Now
Share This Article