ನಗರಸಭೆ ಗುತ್ತಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ : ಅಸಲಿ ಕಾರಣ ಏನ್ ಗೊತ್ತಾ..?

K 2 Kannada News
ನಗರಸಭೆ ಗುತ್ತಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ : ಅಸಲಿ ಕಾರಣ ಏನ್ ಗೊತ್ತಾ..?
WhatsApp Group Join Now
Telegram Group Join Now

K2kannadanews.in

attempted suicide ರಾಯಚೂರು : ಕಳೆದ 7 ತಿಂಗಳಿಂದ (Months) ವೇತನ (salary) ಪಾವತಿಯಾಗದೇ ಇರುವುದರಿಂದ ಮಾನಸಿಕವಾಗಿ (Mentally)ನೊಂದಿದ್ದ ರಾಯಚೂರು ನಗರಸಭೆ ಗುತ್ತಿಗೆ ಕಾರ್ಮಿಕನೋರ್ವ (contract worker) ಇಂದು ಬೆಳಗ್ಗೆ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ನಡೆದಿದೆ.

ಹೌದು ರಾಯಚೂರು (Raichur) ನಗರ ಸಭೆಯಲ್ಲಿ ಬೀದಿ ದೀಪ (Street light) ನಿರ್ವಹಣೆ ವಿಭಾಗದಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ ಅಜ್ಗರ್ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ 7 ತಿಂಗಳಿಂದ ವೇತನ ಪಾವತಿಯಾಗದೇ ಇರುವುದರಿಂದ ಮಾನಸಿಕವಾಗಿ ನೊಂದಿದ್ದ. ಕೆಲಸ ಮಾಡಿದ ವೇತನ ಪಾವತಿಗಾಗಿ ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತರನ್ನು (Municipal Commissioner) ಬೇಟಿ ಮಾಡಿ ಮನವಿ ಮಾಡಿದ್ದ, ಆದರೂ ವೇತನ ಪಾವತಿ ಮಾಡಿಲ್ಲ, ಮನೆಯಲ್ಲಿ ಪರಸ್ಥಿತಿ ಕ್ಲಿಷ್ಟರವಾಗಿದ್ದು ಮನೆಗೆ (Home) ದಿನ ಬಳಕೆ ವಸ್ತುಗಳು ಖರೀದಿಗೆ ಹಣವಿಲ್ಲದ (Money) ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆ ಕಳೆದ ರಾತ್ರಿಯೂ ಉಪಗುತ್ತಿಗೆದಾರ ನರಸರೆಡ್ಡಿ ಮನೆಗೆ ಹೋಗಿ ಬಾಕಿ ವೇತನ ನೀಡಿ ಕುಟುಂಬ ನಿರ್ವಹಣೆಯಲ್ಲಿ ತೊಂದರೆಯಾಗಿದೆ ಎಂದು ಅಂಗಲಾಚಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಕುರಿತು ಸದ‌ರ್ ಬಜಾರ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

WhatsApp Group Join Now
Telegram Group Join Now
Share This Article