ಮಾನ್ವಿ : ಬಸವಕೇಂದ್ರ, ಮಹಿಳಾ ಬಸವಕೇಂದ್ರ ಮತ್ತು ಯುವ ಬಸವಕೇಂದ್ರ ವತಿಯಿಂದ ಡಿ. 27 ರಂದು ಪಟ್ಟಣದ ಕಾಕತೀಯ ಶಾಲಾ ಆವರಣದಲ್ಲಿ ಸಂಜೆ 6 ರಿಂದ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ವಡವಾಟಿ ಶಾರದಾ ಭರತ್ ಇವರಿಂದ ವಚನ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಮಾಜಿ ಸದಸ್ಯೆ ವಡವಾಟಿ ಶಾರದಾ ಭರತ್ ರಾಜ್ಯ, ದೇಶ ಮತ್ತು ಹೊರದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿಸಿದ್ದಾರೆ ವಚನ ಸಂಗೀತ ಕಾರ್ಯಕ್ರಮದಲ್ಲಿ ಎಲ್ಲಾರು ಪಾಲ್ಗೊಂಡು ಯಶ್ವಿಗೊಳಿಸಲು ಪ್ರಕಟಣೆಯಲ್ಲಿ ಬಸವಕೇಂದ್ರದ ಅಧ್ಯಕ್ಷ ನಾಗರಾಜ ಬಳಿಗಾರ ಕೋರಿದ್ದಾರೆ.
[ays_poll id=3]