ಚಿಕ್ಕಸುಗೂರು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ..

K 2 Kannada News
ಚಿಕ್ಕಸುಗೂರು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ..
Oplus_131072
WhatsApp Group Join Now
Telegram Group Join Now

K2kannadanews.in

Terrible accident ರಾಯಚೂರು : ಟಂಟಂ (Tamtam) ವಾಹನ ಓವರ್ ಟೇಕ್ (overtake) ಮಾಡುವ ಬರದಲ್ಲಿ, ತರಕಾರಿ (vegetable) ಹೊತ್ತೊಯ್ಯುತ್ತಿದ್ದ ಲಾರಿಯೊಂದು (lorry) ಎದುರಿಗೆ ಬರುತ್ತಿದ್ದ ಲಾರಿಗೆ (opposite lorry) ಡಿಕ್ಕಿ ಹೊಡೆದ ಪರಿಣಾಮ, ತರಕಾರಿ ಲಾರಿಯಲ್ಲಿದ್ದ ಕ್ಲೀನರ್ ಮೃತಪಟ್ಟ (dies) ಘಟನೆ ಚಿಕ್ಕಸುಗೂರು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

ರಾಯಚೂರು (Raichur) ತಾಲೂಕಿನ ಚಿಕ್ಕಸುಗುರು ಗ್ರಾಮದ ಬಳಿ ಹಾದು ಹೋಗಿರುವ ಹೈದರಾಬಾದ್ ರಾಯಚೂರು ಹೆದ್ದಾರಿಯಲ್ಲಿ (Hyderabad-raichur highway) ಘಟನೆ ಜರುಗಿದೆ. ಹೊಸಪೇಟೆ (hospete) ಮೂಲದ ತರಕಾರಿ ಲಾರಿ, ಹೈದರಾಬಾದ್ ಗೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬೆಳ್ಳಂ ಬೆಳಗ್ಗೆ ಟಂಟಂ ವಾಹನ ಓವರ್ ಟೆಕ್ ಮಾಡುವ ವೇಳೆ, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಒಂದು ಘಟನೆಯಲ್ಲಿ ತರಕಾರಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದ ತಕ್ಷಣ ರಿಮ್ಸ್ ಆಸ್ಪತ್ರೆಗೆ ರವಾನಿಸುತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೂಲಗಳ ಪ್ರಕಾರ ಗುರುವಾರ ಬೆಳಗಿನ ಜಾವ 3 ರಿಂದ 4 ಗಂಟೆ ಸುಮಾರಿಗೆ ಅಪಘಾತ ಜರುಗಿದೆ. ತರಕಾರಿ ಒಯ್ಯುತ್ತಿದ್ದ ಲಾರಿ ಚಾಲಕ ಮಧ್ಯ ಸೇವನೆ ಮಾಡಿ ಲಾರಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಘಟನೆ ಬಳಿಕ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು, ಮಾಹಿತಿ ತಿಳಿದು ಟ್ರಾಫಿಕ್ ಕ್ಲಿಯರ್ ಮಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article