ಚರಂಡಿಯಲ್ಲಿ ಸಿಲುಕಿದ ಅಂಕಲಿಮಠ – ಮಂಗಳೂರು ಬಸ್..

K 2 Kannada News
ಚರಂಡಿಯಲ್ಲಿ ಸಿಲುಕಿದ ಅಂಕಲಿಮಠ – ಮಂಗಳೂರು ಬಸ್..
WhatsApp Group Join Now
Telegram Group Join Now

K2kannadanews.in

Local News ಮುದುಗಲ್ : ಅಂಕಲಿಮಠ – ಮಂಗಳೂರು ಸಾರಿಗೆ ಬಸ್ ಹೂನೂರು ಗ್ರಾಮದಲ್ಲಿನ ಚಿಕ್ಕ ಚರಂಡಿಯಲ್ಲಿ ಸಿಲುಕಿಕೊಂಡ ಘಟನೆ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ ಘಟನೆ ಜರುಗಿದೆ. ಸಿಸಿ ರಸ್ತೆ ಮಾಡದೆ ಇರುವದು ಈ ಅವಘಡಕ್ಕೆ ಕಾರಣವಾಗಿದೆ ಎಂದು ಹೂನೂರು ಗ್ರಾಮಸ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಮಳೆಯಾದರೆ ಸಾಕು ಈ ರಸ್ತೆ ಕೆಸರುಗದ್ದೆಯಾಗಿ ವಾಹನ ಸವಾರರಿಗೆ ಸಂಚಾರ ಮಾಡಲು ಹಾಗೂ ಗ್ರಾಮದ ಜನರಿಗೆ ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಚಾಲಕನ ಸಮಯ ಪ್ರಜ್ಞೆ ಯಿಂದ ಅದೃಷ್ಟವಶ ಬಸ್ ನಲ್ಲಿ ಇರುವ ಪ್ರಯಾಣಿಕರಿಗೆ ಯಾವುದೇ ಅನಾಹುತ ಆಗಿಲ್ಲ.

WhatsApp Group Join Now
Telegram Group Join Now
Share This Article