This is the title of the web page
This is the title of the web page
Crime NewsLocal News

ಅಗ್ನಿ ಅವಘಡ ಲಕ್ಷಾಂತರ ಹತ್ತಿ ಸುಟ್ಟು ಭಸ್ಮ


ರಾಯಚೂರು : ನಗರದ ಮಂಚಲಾಪುರ ರಸ್ತೆಯಲ್ಲಿ ಬರುವ ಜಿನ್ನಿಂಗ್ ಫ್ಯಾಕ್ಟರಿ ಮತ್ತು ಕಾಟನ್ ಪ್ರೆಸ್ಸಿಂಗ್ ಮಿಲ್ ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹತ್ತಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ರಾಯಚೂರು ನಗರದ ಮಂಚಲಾಪುರ ರಸ್ತೆಯಲ್ಲಿ ಬರುವಂತಹ ರಾಜೇಂದ್ರ ಆಗ್ರೋ ಇಂಡಸ್ಟ್ರೀಸ್ ಕಾಟನ್ ಜಿಂನ್ನಿಂಗ್ ಮಿಲ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿ ಒಳಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ರೈತರಿಂದ ಖರೀದಿ ಮಾಡಿ ಶೇಖರಿಸಿ ಇಟ್ಟಿದ್ದ ಹತ್ತಿಗೆ ಬೆಂಕಿ ವ್ಯಾಪಿಸಿದೆ. ಈ ವೇಳೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ಕಿತ್ತಿ ಕೊಂಡಿದೆ ಎಂದು ಹೇಳಲಾಗುತ್ತಿದೆ.


[ays_poll id=3]