ಮಹಿಳಾ ಸಾಂತ್ವಾನ ಕೇಂದ್ರದ ಕಟ್ಟಡಿಂದ ಜಿಗಿದಿದ್ದ ಯುವತಿ ಆಸ್ಪತ್ರೆಯಲ್ಲಿ ಸಾವು..!

K 2 Kannada News
ಮಹಿಳಾ ಸಾಂತ್ವಾನ ಕೇಂದ್ರದ ಕಟ್ಟಡಿಂದ ಜಿಗಿದಿದ್ದ ಯುವತಿ ಆಸ್ಪತ್ರೆಯಲ್ಲಿ ಸಾವು..!
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಮಹಿಳಾ ಸಾಂತ್ವಾನ ಕೇಂದ್ರದ ಕಟ್ಟಡ ಮೇಲಿಂದ ಬಿದ್ದು ಯುವತಿ ಮೃತಪಟ್ಟ ಘಟನೆ ರಾಯಚೂರು ನಗರದಲ್ಲಿ ನಡೆದಿದ್ದು, ಪ್ರಿಯಕರ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ರಾಯಚೂರು ನಗರದ ದೇವರ ಕಾಲೋನಿಯಲ್ಲಿನ ಸಾಂತ್ವಾನ ಕೇಂದ್ರದಲ್ಲಿ ಘಟನೆ ನಡೆದಿದ್ದು, ಪ್ರೇಮ ವಿಚಾರಕ್ಕೆ ಠಾಣೆ ಮೆಟ್ಟಿಲು ಹತ್ತಿತ್ತು, ವಿನಯ ರೆಡ್ಡಿ ಮತ್ತು ಅನುರಾಧ (19) ಪರಸ್ಪರ ಪ್ರೀತಿಸಿದ್ದರು. ರಕ್ಷಣೆ ಕೋರಿ ಮಾರ್ಕೆಟ್‌ ಯಾರ್ಡ್ ಪೊಲೀಸ್ ಠಾಣೆಗೆ ಹೋಗಿದ್ದರು. ಆರಂಭದಲ್ಲಿ ಮದುವೆಗೆ ಯುವತಿ ಮನೆಯವರು ಒಪ್ಪಿಗೆ ನೀಡಿರಲಿಲ್ಲ, ಯುವತಿ ಹಟಿ ಬಿಡದ ಹಿನ್ನೆಲೆಯಲ್ಲಿ ಒಪ್ಪಿಗೆ ಸೂಚಿಸಿದ್ದರು, ಆದರೆ ಪ್ರಿಯಕರನ ಮನೆಯವರ ಒಪ್ಪಿರಲಿಲ್ಲ ಹೀಗಾಗಿ ಯುವತಿಯನ್ನ ಪೊಲೀಸರು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು.

ಈ ಮಧ್ಯ ಯುವಕ ಸಹ ಮದುವೆಗೆ ನಿರಾಕರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದರಿಂದ ಯುವತಿ ಮುಂದೆ ಏನು ಮಾಡಬೇಕು ಎಂದು ತೋಚದೆ ಕಾಂತವನ್ನು ಕೇಂದ್ರದ ಕಟ್ಟಡದ ಮೇಲಿಂದ ಕಳೆದ ರಾತ್ರಿ ಹಾರಿ ಯುವತಿ‌ ಆತ್ಮಹತ್ಯೆ ಯತ್ನಿಸಿದ್ದಾಳೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ರಿಂಗ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂದಿಸಿದಂತೆ ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

WhatsApp Group Join Now
Telegram Group Join Now
Share This Article