ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ..

K 2 Kannada News
ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ..
Oplus_131072
WhatsApp Group Join Now
Telegram Group Join Now

K2kannadanews.in

Crime News ಬೆಂಗಳೂರು : ವಿಧಿಯ ಆಟಕ್ಕೆ ಮಗ(son) ನೇಣಿಗೆ (suicide) ಕೊರಳೊಡಿದ್ದ. ಆತನ ಮೃತದೇಹ (Dead body) ಮನೆಯಿಂದ ಹೋಗ್ತಿದ್ದಂತೆ ಜೀವ ಕೊಟ್ಟ ತಾಯಿಯ (Mother) ಉಸಿರೇ ನಿಂತು ಹೋದ ಘಟನೆ ಬೆಂಗಳೂರಿನ (Benglore) ಕಾಮಾಕ್ಷಿಪಾಳ್ಯದ ಕಾವೇರಿಪುರದ ಮನೆಯೊಂದೆಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನೊರ್ವ (Cab driver) ಆತ್ಮಹತ್ಯೆಗೆ ಶರಣಾಗಿದ್ದಾನೆ. ಅರುಣ್ ಕುಮಾರ್ (37) ಮೃತ ದುರ್ದೈವಿ. ಬೆಂಗಳೂರಿನ ಕಾವೇರಿಪುರದ ನಿವಾಸಿಯಾದ ಅರುಣ್‌ ಕುಮಾರ್‌ ಫ್ಯಾನಿಗೆ (Fan) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರುಣ್ ಕುಮಾರ್ ಭಾನುವಾರ (Sunday) ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮಗನ ಅಗಲಿಕೆಯಿಂದ ನೊಂದಿದ್ದ ತಾಯಿ ಮಗನ ಶವದ ಮುಂದೆ ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು.

ಮಗನ ನೋಡುತ್ತಲೆ ತಾಯಿಯು ಕೊನೆಯುಸಿರೆಳೆದಿದ್ದಾರೆ. ಅರುಣ್ ಕುಮಾರ್ ತಾಯಿ ಸರಸ್ವತಿ (78) ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ (Kamakshi palya police) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ (Case) ದಾಖಲಾಗಿದೆ. ಅರುಣ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನೀರವ ಮೌನ ಆವರಿಸಿದೆ.

WhatsApp Group Join Now
Telegram Group Join Now
Share This Article