ಚಿರತೆ ದಾಳಿ : ಕುರಿ ದೊಡ್ಡಿ ಮೇಲೆ ದಾಳಿ, ಮರಿ ಹೊತ್ತೊಯ್ದ

K 2 Kannada News
ಚಿರತೆ ದಾಳಿ : ಕುರಿ ದೊಡ್ಡಿ ಮೇಲೆ ದಾಳಿ, ಮರಿ ಹೊತ್ತೊಯ್ದ
WhatsApp Group Join Now
Telegram Group Join Now

K2kannadanews.in

Leopard Attack ದೇವದುರ್ಗ : ಜಿಲ್ಲೆಯ ಚಿರತೆ ದಾಳಿ ಮುಂದುವರೆದಿದೆ ಚಿರತೆಯಿಂದ ಇದೀಗ ಕುರಿಗಾಹಿಗಳಿಗೆ ಸಮಸ್ಯೆಯಾಗುತ್ತಿದೆ, ಕುರಿ ದೊಡ್ಡಿ ಮೇಲೆ ದಾಳಿ ಮಾಡಿದ ಚಿರತೆ, ಒಂದು ಕುರಿಯನ್ನು ಗಾಯಗೊಳಿಸಿ ಮತ್ತೊಂದು ಕುರಿಮರಿಯನ್ನು ಹೊತ್ತೊಯ್ದ ಘಟನೆ ನಡೆದಿದೆ.

ರಾಯಚೂರು (Raichur) ಜಿಲ್ಲೆ ದೇವದುರ್ಗ (Devadurga) ತಾಲೂಕಿನ ಯರಗುಡ್ಡ ಗ್ರಾಮದ (Village) ಹೊರವಲಯದಲ್ಲಿ ಘಟನೆ ನಡೆದಿದ್ದು, ಕುರಿಗಾಹಿಗಳಿಗೆ ಚಿರತೆ (Leopard) ಕಾಟದಿಂದ ಚಿಂತೆಗೀಡು ಮಾಡುವಂತಾಗಿದೆ. ಕುರಿದೊಡ್ಡಿಗೆ ನುಗ್ಗಿ ಕುರಿಮರಿಯನ್ನು ಚಿರತೆ ಹೊತ್ತೊಯ್ದಿದೆ. ಒಂದು ಕುರಿಮರಿಗೆ ಗಾಯಗೊಳಿಸಿದ್ದು, ಇನ್ನೊಂದು ಕುರಿಯನ್ನು ಹೊತ್ತೊಯ್ದಿದೆ. ನಂತರ ಬೆಳಗಿನ ಜಾವ 3 ಗಂಟೆವರೆ ಕುರಿದೊಡ್ಡಿ ಸುತ್ತಲೂ ಚಿರತೆ ಓಡಾಟನಡೆಸಿದೆ. ಇದರಿಂದ ನಿದ್ದೆಗೆಟ್ಟು ಚಿರತೆಯಿಂದ ಕುರಿಗಳನ್ನು ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

WhatsApp Group Join Now
Telegram Group Join Now
Share This Article