ಅರೆಹುಚ್ಚಿ ಮಹಿಳೆ ಚಿಕ್ಕ ಮಕ್ಕಳನ್ನ ಮುಟ್ಟಿದಕ್ಕೆ ಮರಕ್ಕೆ ಕಟ್ಟಿ ಹಿಂಸೆ..

K 2 Kannada News
ಅರೆಹುಚ್ಚಿ ಮಹಿಳೆ ಚಿಕ್ಕ ಮಕ್ಕಳನ್ನ ಮುಟ್ಟಿದಕ್ಕೆ ಮರಕ್ಕೆ ಕಟ್ಟಿ ಹಿಂಸೆ..
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಅರೆ ಹುಚ್ಚಿ ಮಹಿಳೆ ಬಡಾವಣೆಯಲ್ಲಿ ಮಕ್ಕಳನ್ನ ಮುಟ್ಟಿದ್ದಕ್ಕೆ, ಮಕ್ಕಳ ಕಳ್ಳಿ ಎಂದು ತಿಳಿದು, ಬಡಾವಣೆ ನಿವಾಸಿಗಳು ಮರಕ್ಕೆ ಕಟ್ಟಿ ಹಿಂಸೆ ನೀಡಿದ ಘಟನೆ ನಗರದ ಮಕ್ತಲಪೇಟೆ ಬಡಾವಣೆಯಲ್ಲಿ ನಡೆದಿದೆ.

ಹೌದು ರಾಯಚೂರು ನಗರದ ಮಕ್ತಲ್ ಪೇಟೆ ಬಡಾವಣೆಯಲ್ಲಿ ಒಂದು ಘಟನೆ ನಡೆದಿದೆ. ಅರೆಹುಚ್ಚಿ ಮಹಿಳೆಯೊಬ್ಬಳು ಚಿಕ್ಕ ಮಕ್ಕಳನ್ನ ಮುಟ್ಟಿದಕ್ಕೆ, ಮಕ್ಕಳ ಕಳ್ಳಿ ಎಂದು ತಿಳಿದ ಬಡಾವಣೆ ನಿವಾಸಿಗಳು ಮಹಿಳೆಗೆ ಮರಕ್ಕೆ ಕಟ್ಟಿಹಾಕಿ ಹಿಂಸೆ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ 112 ಪೊಲೀಸ್ ವಾಹನ ಸಿಬ್ಬಂದಿಗಳು, ಮಹಿಳೆಯನ್ನ ಸ್ಥಳೀಯರಿಂದ ರಕ್ಷಿಸಿ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಯಲ್ಲಿ ಮಹಿಳೆಯನ್ನು ವಿಚಾರಿಸಿದಾಗ ರಾಯಚೂರು ತಾಲ್ಲೂಕಿನ ವಡವಟ್ಟಿ ಗ್ರಾಮದ ಮಹಿಳೆ ಎಂದು ತಿಳಿದು ಬಂದಿದೆ. ಕೂಡಲೇ ಗ್ರಾಮದಲ್ಲಿ ಮಹಿಳೆಗೆ ಸಂಬಂಧಿಸಿದ ಕುಟುಂಬದವರನ್ನು ಸಂಪರ್ಕಿಸಿ ಠಾಣೆಗೆ ಕರೆಸಿ, ಕುಟುಂಬ ವರ್ಗಕ್ಕೆ ಬುದ್ದಿವಾದ ಹೇಳಿ, ಮಹಿಳೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿ ಕುಟುಂಬದವರೊಂದಿಗೆ ಕಳುಹಿಸಿದ್ದಾರೆ.

WhatsApp Group Join Now
Telegram Group Join Now
Share This Article