This is the title of the web page
This is the title of the web page
State News

ಪ್ರಕೃತಿ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು ಹಸಿರು ಆಯವ್ಯಯ


K2 ನ್ಯೂಸ್ ಡೆಸ್ಕ್ : ಪ್ರಕೃತಿಯ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು 100 ಕೋಟಿ ರೂ. ಮೊತ್ತದ ಹಸಿರು ಆಯವ್ಯಯ (ಇಕೋ ಬಜೆಟ್)ವನ್ನು ಸರ್ಕಾರ ರೂಪಿಸಿದೆ ಎಂದರು.

ಜೈವಿಕತೆ ಮತ್ತು ಆರ್ಥಿಕತೆ ಸಮಾನಂತರವಾಗಿ ಹೋಗುತ್ತದೆ. ಜೈವಿಕತೆಗಿಂತ ಆರ್ಥಿಕತೆ ವೇಗವಾಗಿ ಹೋಗುತ್ತಿದೆ. ಈಗ ಜೈವಿಕ ಆರ್ಥಿಕತೆ ಬರಬೇಕಿದೆ. ಪುನರ್ಬಳಕೆ ಹಾಗೂ ಮರುಬಳಕೆಯ ಮಂತ್ರವನ್ನು ಪಾಲಿಸಬೇಕಿದೆ ಎಂದರು.

*ನೀರಿನ ನಿರ್ವಹಣೆಯ ಮಹತ್ವ :*
ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ , ಹವಾಮಾನ ವೈಪರಿತ್ಯ, ಸುಸ್ಥಿರ ಅಭಿವೃದ್ಧಿ ಕುರಿತು ಚರ್ಚೆಯಾಗುತ್ತಿದ್ದು, ರಾಜ್ಯದ ಅಭಿವೃದ್ದಿಗೆ ಪೂರಕವಾಗುವ ಸಲಹೆಗಳನ್ನು ನೀಡಬೇಕು.
ಸಮ್ಮೇಳನಗಳು ಕೇವಲ ಬಹಳ ದಿನಗಳ ನಂತರ ಸೇರುವ ಸಭೆಗಳಾಗಬಾರದು. ಹವಾಮಾನ ವೈಪರಿತ್ಯ ಆಗುತ್ತಿದೆ. ಅದರ ನಿಯಂತ್ರಣ, ಬದಲಾವಣೆ ಹಾಗೂ ಕಾರ್ಬನ್ ಹೆಚ್ಚಳದ ಮಾಡುವ ಬಗ್ಗೆ ಚರ್ಚೆಯಾಗಬೇಕು. ವಿಕೋಪಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ಹವಾಮಾನ ವೈಪರಿತ್ಯದಿಂದಾಗಿ ಬರಪ್ರದೇಶಗಳು ಮರಳುಗಾಡಾಗುತ್ತಿವೆ. ನದಿನೀರು ಸಮುದ್ರವನ್ನು ಸೇರುತ್ತಿಲ್ಲ. ಇದರಿಂದಾಗಿ ಮಳೆಯ ಸಂಭವ ಕಡಿಮೆಯಾಗಿ, ನೀರಿನ ಸಂಪನ್ಮೂಲ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ನಿರ್ವಹಣೆಯ ಬಹಳ ಮಹತ್ವದ್ದಾಗಿದೆ ಎಂದರು.

*ನೀತಿ ವೈಜ್ಞಾನಿಕವಾಗಿರಬೇಕು:*
ಮನುಷ್ಯ ಮತ್ತು ಪ್ರಾಕೃತಿಕ ಸಂಪತ್ತಿನ ನಡುವಿನ ಸಂಬಂಧದ ಬಗ್ಗೆ ಸಂಶೋಧನೆಯಾಗಬೇಕು. ಪ್ರಾಕೃತಿಕ ಸಂಪತ್ತನ್ನು ನಮ್ಮ ಹಿರಿಯರು ನಮಗೆ ಬಿಟ್ಡು ಹೋಗಿದ್ದಾರೆ‌ . ನಾವು ನಮ್ಮ ಮುಂದಿನ ಪೀಳಿಗೆಗೆ ಬಿಟ್ಡು ಹೋಗದಿದ್ದರೆ, ನಾವು ಭವಿಷ್ಯದಿಂದ ಕದಿಯುತ್ತಿದ್ದೇವೆ ಎಂದರ್ಥ. ಆದ್ದರಿಂದ ಅತ್ಯಂತ ವೈಜ್ಞಾನಿಕವಾಗಿ, ಪ್ರಕೃತಿಗೆ ಹತ್ತಿರವಾಗಿರುವಂತಹ ನೀತಿ ರೂಪಿಸಬೇಕು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಸಿ.ಸಿ.ಪಾಟೀಲ್, ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಹಾಗೂ ಮತ್ತಿತರರು ಹಾಜರಿದ್ದರು.


[ays_poll id=3]