ಮಸ್ಕಿ : ವರ್ಷದ ಹಿಂದೆ ಮಂಜುನಾಥನ ದರ್ಶನಕ್ಕೆ ಹೋದ ಕುಟುಂಬ ನಾಪತ್ತೆ..

K 2 Kannada News
ಮಸ್ಕಿ : ವರ್ಷದ ಹಿಂದೆ ಮಂಜುನಾಥನ ದರ್ಶನಕ್ಕೆ ಹೋದ ಕುಟುಂಬ ನಾಪತ್ತೆ..
WhatsApp Group Join Now
Telegram Group Join Now

K2kannadanews.in

Crime News ಮಸ್ಕಿ : ಒಂದು ವರ್ಷದ ಹಿಂದೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋದ ಕುಟುಂಬವೊಂದು ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಪಾರ್ವತಿ ನಗರದ ಕುಟುಂಬವೇ ನಾಪತ್ತೆಯಾದ ಕುಟುಂಬ. ಜುಲೈ 1 2023ರ ಜು.1 ರಂದು ಕುಟುಂಬದ ಅಶೋಕ ಪಟ್ಟಣ ಶೆಟ್ಟಿ (41) ವಿಜಯಲಕ್ಷ್ಮಿ(32) ಇವರ ಮಗ ಶಶಿಧರ(8) ಮೂವರು ಧರ್ಮಸ್ಥಳಕ್ಕೆ ಹೋಗಿ ಬರುತ್ತೇವೆ ಎಂದು ಹೋದವರು ಒಂದು ವರ್ಷ ಕಳೆದರು ಮರಳಿ ಮನೆಗೆ ಬಂದಿಲ್ಲ. ಇದುವರೆಗೂ ಪತ್ತೆಯಾಗಿಲ್ಲ, ಮೂರು ಜನ ಕುಟುಂಬದ ಸಂಪರ್ಕಕ್ಕೂ ಬಂದಿಲ್ಲ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

WhatsApp Group Join Now
Telegram Group Join Now
Share This Article