ತುರ್ವಿಹಾಳ: ರಸ್ತೆ ದಾಟುತ್ತಿದ್ದ ವೇಳೆ ಲಾರಿ ಹರಿದಿ ಮಗು ಸಾವು..

K 2 Kannada News
ತುರ್ವಿಹಾಳ: ರಸ್ತೆ ದಾಟುತ್ತಿದ್ದ ವೇಳೆ ಲಾರಿ ಹರಿದಿ ಮಗು ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Accident News ಮಸ್ಕಿ : ಸೀಮಂತ ಕಾರ್ಯಕ್ರಮದ ನಿಮಿತ್ಯ ಹುಬ್ಬಳ್ಳಿ (Hubbli) ತೆರಳುತ್ತಿದ್ದ ವೇಳೆ ಊಟಕ್ಕೆ (Lunch) ನಿಲ್ಲಿಸಿದಾಗ, ಮಗು (Baby) ರಸ್ತೆ ದಾಟುತ್ತಿದ್ದ (Crossing road) ವೇಳೆ ಸಿಲಿಂಡರ್ ತುಂಬಿದ ಲಾರಿ (Lorry) ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.

 

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲ್ಲೂಕಿನ ತುರ್ವಿಹಾಳ ಸಮೀಪದ ಕಲಮಂಗಿ ಮತ್ತು ಊಮಲೂಟಿ ಗ್ರಾಮಗಳ ಮಧ್ಯೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ (Friday) ಘಟನೆ ಜರುಗಿದೆ. ಮೃತ ಮಗು ಮಧು ಬಸವರಾಜ ಉರಕಡ್ಲಿ (8) 2ನೇ ತರಗತಿ ಓದುತ್ತಿದ್ದ ಎಂದು ಗುರುತಿಸೊಲಾಗಿದೆ. ಮೂಲತಃ ದೇವದುರ್ಗ (Devadurga) ತಾಲ್ಲೂಕಿನ ಗಬ್ಬೂರು ಗ್ರಾಮದವರಾಗಿದ್ದು, ಸ್ವಗ್ರಾದಿಂದ ಸಿಂಧನೂರು (Sindhanur) ಕುಷ್ಟಗಿ (Kushtagi) ಮಾರ್ಗವಾಗಿ ಸೀಮಂತ ಕಾರ್ಯಕ್ರಮದ ನಿಮಿತ್ಯ ಹುಬ್ಬಳ್ಳಿಗೆ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಊಟಕ್ಕಾಗಿ ವಾಹನ ನಿಲ್ಲಿಸಿದಾಗ, ಮಗು ರಸ್ತೆ ದಾಟಲು ಹೋದ ವೇಳೆ ಸಿಲಿಂಡರ್ ತುಂಬಿದ ಲಾರಿ ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article