This is the title of the web page
This is the title of the web page
Crime News

ಈಜಲು ಹೋಗಿದ್ದ ಬಾಲಕ ಸಾವು, ಮುಗಿಲು ಮುಟ್ಟಿದ ಆಕ್ರಂದನ‌


ಸಿರವಾರ: ಬಿಸಿಲಿನ ಬೇಗೆ ತಾಳದೇ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ಜರುಗಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದ ಮೃತ ಬಾಲಕ ನವಾಜ್ (13) ಎಂದು ತಿಳಿದು ಬಂದಿದೆ.‌ ಬೇಸಿಗೆಯಾಗಿದ್ದರಿಂದ ಮಾಡಗಿರಿ ರಸ್ತೆಯಲ್ಲಿರುವ ಹಳ್ಳಕ್ಕೆ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಬಾಲಕನನ್ನು ನೀರಿನಿಂದ ತೆಗೆದು ಬದುಕಿಸುವ ಪ್ರಯತ್ನ ಸಾಕಷ್ಟು ಮಾಡಿದರಾದರೂ ಕೂಡ ಯಾವುದೇ ಪ್ರಯತ್ನ ಸಲ್ಲಿಸಲಿಲ್ಲ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]