ಕಳ್ಳರಿಗೆ ವರದಾನವಾದ ಮಳೆ – ಪಾರ್ಕ್‌ನಲ್ಲಿ ಶ್ರೀಗಂಧದ ಮರ ಕಳವು..!

K 2 Kannada News
ಕಳ್ಳರಿಗೆ ವರದಾನವಾದ ಮಳೆ – ಪಾರ್ಕ್‌ನಲ್ಲಿ ಶ್ರೀಗಂಧದ ಮರ ಕಳವು..!
Oplus_131072
WhatsApp Group Join Now
Telegram Group Join Now

K2kannadanews.in

Crime news ಬೆಂಗಳೂರು : ಸಧ್ಯ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನತೆ ತತ್ತರಿಸಿ ಹೋದ್ದಾರೆ. ಪರದಾಟಗಳು ಒಂದಲ್ಲ ಎರಡಲ್ಲ. ಅದೇ ಮಳೆ ಕಳ್ಳರಿಗೆ ವರದಾನವಾಗಿದೆ. ಭಾರೀ ಮಳೆಯ ನಡುವೆ ಬಿಬಿಎಂಪಿ ಪಾರ್ಕ್‌ನ ಗಂಧದ ಮರವನ್ನು ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ.

ಹೌದು ಬೆಂಗಳೂರಿನ ಯಲಹಂಕ ನ್ಯಾಯಾಂಗ ಲೇಔಟ್‌ನಲ್ಲಿಉವ ಬಿಬಿಎಂಪಿ ಪಾರ್ಕ್‌ನಲ್ಲಿ ಕಳೆದ ರಾತ್ರಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಲಾಗಿದೆ. ಘಟನೆಯು ಬೆಳಗ್ಗೆ ಸ್ಥಳೀಯರು ವಾಕಿಂಗ್ ಹೋಗಿದ ವೇಳೆ ಮರ ಕಳುವಾದದ್ದನ್ನು ಗಮನಿಸಿದ್ದಾರೆ. ಬಳಿಕ ಗಂಧದ ಮರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article