K2kannadanews.in
Flood ಯಾದಗಿರಿ : ಹೆಚ್ಚಿನ ಮಳೆಯಿಂದಾಗಿ ಭೀಮ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು ಈ ವೇಳೆ ದನಗಳಿಗೆ ನೀರು ಕುಡಿಸಲು ಹೋದ ಇಬ್ಬರು ಯುವಕರು ನಿರುಪಾಲಾದ ಘಟನೆ.
ಯಾದಗಿರಿ ಜಿಲ್ಲೆಯ ಭೀಮಾನದಿ ಪ್ರವಾಹಕ್ಕೆ ಯುವಕರಿಬ್ಬರ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಶವ ಪತ್ತೆ ಹಚ್ಚಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಭೀಮಾನದಿಯಲ್ಲಿ ಮೋಸಳೆಗಳ ಕಾಟ ಹೆಚ್ಚಿದ್ದು, ಶವ ಶೋಧ ಕಾರ್ಯ ಮಾಡಲು ಮೋಸಳೆಗಳ ಭೀತಿ ಎದುರಾಗಿದೆ. ಶವ ಪತ್ತೆ ಹಚ್ಚಲು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೂ ಜೀವ ಭಯ ಕಾಡುತ್ತಿದೆ. ಭಯದ ನಡುವೆಯೂ ಬೋಟ್ ಮೂಲಕ ಶವ ಶೋಧ ಕಾರ್ಯಾಚರಣೆ ಮುಂದುವರಿದಿದೆ.