K2kannadanews.in
Political News ರಾಯಚೂರು : ರಾಜ್ಯ ಸರಕಾರ ತನಗೆ ತಾನು, ಆತ್ಮಸಾಕ್ಷಿಯಾಗಿ ಆತ್ಮಾವಲೋಕನ ಮಾಡಿಕೊಳ್ಳಲಿ, ಚುನಾವಣೆಗೆ ಮುಂಚೆ ಹೆಳಿದ ಮಾತಿನ ಮೇಲೆ ಅವರು ನಿಂತಿಲ್ಲ ಎಂದು ರಾಯಚೂರಿನಲ್ಲಿ ನಿಖಿಲ್ ಕುಮಾರ್ ಸ್ವಾಮಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಸೇರಿ ಗ್ಯಾರೆಂಟಿ ಗಳ ಬಗ್ಗೆ ಪ್ರನಾಳಿಕೆಲಿ ಮಾತು ಕೊಟ್ಟು ಏನು ಹೇಳಿದ್ರು. ಗ್ಯಾರೆಂಟಿ ಯೋಜನೆಗಳ ಬಗ್ಗೆ ತಿಂಗಳು ತಿಂಗಳು ಖಾತೆಗೆ ಜಮೆ ಮಾಡ್ತಿವಿ ಅಂದಿದ್ರು, ಆದ್ರೇ ಇತ್ತೀಚೆಗೆ ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳು ನಾಲ್ಕೈದು ಕಡೆ ಮಾತಾಡ್ಬೇಕಾದ್ರೆ. ನಾವೇನು ತಿಂಗಳು ತಿಂಗಳು ಕೊಡ್ತಿನಿ ಅಂದಿದ್ವೇನ್ರಿ, ಯಾವಾಗ್ಲೂ ಬರ್ತದಪ್ಪಾ ಕಾಯ್ಬೇಕು ಅಂತಾರೆ.
ಆದ್ರೆ ಎಂಪಿ ಚುನಾವಣೆ ಬಂದಾಗ ನಾಲ್ಕು ಇಟ್ಕಂಡಿದ್ದು ಹಣ ಒಂದೇ ಸಾರಿ ಹಾಕ್ತಾರೆ. ಉಪಚಿನಾವಣೆ ಬಂದಾಗ ಒಂದೇ ಸಾರಿ ನಾಲ್ಕು ತಿಂಗಳ ಹಣ ಹಾಕ್ತಾರೆ. ಮುಂದೆ ZP, TP ಚುನಾವಣೆ ಬರೋವರೆಗೂ ಕಾಯ್ಬೇಕೆನೋ, ತಿಂಗ್ಳ ತಿಂಗ್ಳ ಬರೋದಿಲ್ಲ ಎಂದು ವ್ಯಂಗ್ಯ ಮಾಡಿದ್ರು. ಪಾಪ ಅವರು ಅವತ್ತು ಮಾತ್ ಕೊಟ್ಟಿದಾರೆ, ಮಾತಿನ ಮೇಲೆ ಇರಬೇಕು ಅಂತ ಏನಿದೆರಿ ಕಾಂಗ್ರೆಸ್ ಪಕ್ಷಕ್ಕೆ, ಯಾವತ್ತಿದಾರೆ ಅವರು ಮಾತಿನ ಮೇಲೆ, ಅವರ ನಾಲಿಗೆ ಮೇಲೆ ಅವರು ಬದ್ದರಿಲ್ಲ, ಅದ್ರಲ್ಲೇನಿದೆ ಅಲ್ವಾ ಎಂದರು.