K2kannadanews.in
Crime News ಮಾನ್ವಿ : ವಾರ್ಡಿನಲ್ಲಿ ಸರಿಯಾಗಿ ನೀರು ಬರ್ತಿಲ್ಲ ಎಂದು ಗ್ರಮ ಪಂಚಾಯತಿ ಅಧ್ಯಕ್ಷನಿಗೆ ಪ್ರಶ್ನೆ ಕೇಳಿದ್ದಕ್ಕೆ, ಅಧ್ಯಕ್ಷ ಸೇರಿ ಹಿಂಬಾಲಕರಿಂದ ಹಲ್ಲೆ ಮಾಡಿದ ಘಟನೆ ಬಾಗಲವಾಡ ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡ, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿ ಹಿಂಬಾಲಕರಿಂದ ಹಲ್ಲೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಪಿ. ತಿಪ್ಪಣ್ಣ, ಹಿಂಬಾಲಕರಿಂದ ಹಲ್ಲೆ ಮಾಡಲಾಗಿದೆ. ಅದೇ ಗ್ರಾಮದ ಓಣಿ ಬಸಪ್ಪ ಎಂಬ ವಕ್ಯಯಮೇಲೆ ಹಲ್ಲೆ ಮಾಡಲಾಗಿದೆ. ಲೆಕ್ಕ ಪರಿಶೋಧನೆಗಾಗಿ ಕರೆದಿದ್ದ ಸಭೆಯಲ್ಲಿ ಗಲಾಟೆ ನಡೆಸಿದ್ದು, ಕಳೆದೊಂದು ವಾರದಿಂದ ಸರಿಯಾಗಿ ನೀರು ಬರ್ತಿಲ್ಲ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗ್ತಿದೆ. ನೀವು ಏನ್ ಮಾಡ್ತಿದ್ದೀರಿ ಎಂದು ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರನ್ನು ಬಸ್ಸಪ್ಪ ಪ್ರಶ್ನೆ ಮಾಡಿದ್ದ, ಬಸಪ್ಪನ ಪ್ರಶ್ನೆಯಿಂದ ಕೆರಳಿ ಕೆಂಡವಾದ ಅಧ್ಯಕ್ಷ ಹಲ್ಲೆಗೆ ಮುಂದಾಗಿದ್ದಾರೆ. ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪ ಮಾಡಲಾಗಿದ್ದು, ಕಾಂಗ್ರೆಸ್ ಮುಖಂಡ ಹಾಗೂ ಗ್ರಾಂ ಪಂಚಾಯತಿ ಅಧ್ಯಕ್ಷ ತಿಪ್ಪಣ್ಣ ಹಲ್ಲೆ ಮಾಡುವ ದೃಶ್ಯ K2 ಲಭ್ಯ ವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳೋದೇ ತಪ್ಪಾ ಎಂದು ಸಾರ್ವಜನಿಕರ ಪ್ರಶ್ನೆ ಮಾಡುತ್ತಿದ್ದಾರೆ.