K2kannadanews.in
road in ditch ರಾಯಚೂರು : ಮುಂಗಾರು ಮೊದಲ ಮಳೆಗೆ ಪತ್ತೆಪೂರ ಗ್ರಾಮದ ಹಳ್ಳದ ರಸ್ತೆ ಕೊಚ್ಚಿ ಹೋಗಿದ್ದು, ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಆರಂಭದ ಮೊದಲ ಮಳೆ ಸುರಿದಿದೆ, ಮೊದಲ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನ ಪತ್ತೆಪೂರ, ಜಾಗೀರ್ ವೆಂಕಟಾಪುರ ಮಧ್ಯದ ಹಳ್ಳ ತುಂಬಿ ಹರಿದಿದ್ದರಿಂದ ನೀರಿನ ರಭಸಕ್ಕೆ ಹಳ್ಳದ ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಪತ್ತೆಪೂರ, ಜಾಗೀರವೆಂಕಟಾಪುರ, ಅರಳಪ್ಪನಹುಡಾ, ರಘುನಾಥಹಳ್ಳಿ ಸೇರಿ 4 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಹಳ್ಳದ ಸೇತುವೆ ಕಾಮಗಾರಿ ನಡೆದಿದ್ದರಿಂದ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಜೋರು ಮಳೆ ಹಿನ್ನೆಲೆ ಹಳ್ಳ ತುಂಬಿ ಬಂದು ರಸ್ತೆ ಕೊಚ್ಚಿ ಹೋಗಿದೆ. ಹಳ್ಳದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದರಿಂದ ಗ್ರಾಮಸ್ಥರು, ಕೂಲಿಕಾರರು, ಮಹಿಳೆಯರು ಪರದಾಟ ನಡೆಸಿದ್ದಾರೆ. ಈ ಗ್ರಾಮಗಳ ಜನ ಈಗ ಸುಮಾರು 40 ಕಿ.ಮೀ ಸುತ್ತುವರೆದು ಆಸ್ಪತ್ರೆ, ಕೆಲಸಗಳಿಗೆ ಹೋಗಬೇಕಾಗಿದೆ.