ಸಾರಿಗೆ ಬಸ್ ಡಿಕ್ಕಿ ಹೊಡೆದು ಆಂದ್ರ ಮೂಲದ ವ್ಯಕ್ತಿ ಸಾವು..

K 2 Kannada News
ಸಾರಿಗೆ ಬಸ್ ಡಿಕ್ಕಿ ಹೊಡೆದು ಆಂದ್ರ ಮೂಲದ ವ್ಯಕ್ತಿ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ರಸ್ತೆ ಬದಿಯಲ್ಲಿ (Road side) ನಡೆದುಕೊಂಡು ಹೋಗುತ್ತಿದ್ದ (walk) ಪಾದಚಾರಿಗೆ ಸಾರಿಗೆ ಬಸ್ (bus) ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ (spot death) ಘಟನೆ ತುಂಗಭದ್ರಾ ಗ್ರಾಮದ ಹತ್ತಿರ ರಾತ್ರಿ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ತುಂಗಭದ್ರಾ ಗ್ರಾಮದ ಬಳಿ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ (AP) ಮಾಧವರಂನ ವೀರೇಶ(34) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಗಿಲ್ಲೇಸೂಗೂರು ಕಡೆಯಿಂದ ಆಂಧ್ರ ಪ್ರದೇಶದ ಮಾಧವರಂನ ಕಡೆ ಹೊರಟಿದ್ದ ಮೃತ ವಿರೇಶಗೆ, ರಾಯಚೂರು ಕಡೆಯಿಂದ ಮಂತ್ರಾಲಯಕ್ಕೆ (mantralaya) ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ (KKRTC bus) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ನಡೆದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ‌ ಘಟನೆ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article